ಬೆಳ್ಳುಳ್ಳಿಯನ್ನು ಎಷ್ಟು ಮತ್ತು ಹೇಗೆ ತಿಂದರೆ ಆರೋಗ್ಯಕ್ಕೆ ಒಳ್ಳೆಯದು?

Written by Anand raj

Published on:

ಬೆಳ್ಳುಳ್ಳಿಯನ್ನು ಮನೆಮದ್ದಾಗಿ ಹಿಂದಿನ ಕಾಲದಿಂದಲೂ ಬಳಸುತ್ತಾ ಬಂದಿದ್ದಾರೆ. ಸಾಮಾನ್ಯ ಶೀತವಾದರೆ ಅದನ್ನು ಹೋಗಲಾಡಿಸಲು ಬೆಳ್ಳುಳ್ಳಿ ಬಳಸುತ್ತಾರೆ, ಇನ್ನು ತ್ವಚೆಯಲ್ಲಿ ಹುಳಕಡ್ಡಿಯಾದರೆ ಬೆಳ್ಳುಳ್ಳಿ ರಸ ಹಚ್ಚಿದರೆ ಮಾಯವಾಗುವುದು. ಹೀಗೆ ಒಂದಲ್ಲಾ ಎರಡಲ್ಲಾ ಬೆಳ್ಳುಳ್ಳಿ ಬಳಸಿ ಹತ್ತಾರು ಮನೆಮದ್ದುಗಳನ್ನು ಮಾಡಲಾಗುವುದು.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ,

ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಯಾರು ದಿನನಿತ್ಯ ಬೆಳಗ್ಗೆ ಬೆಳ್ಳುಳ್ಳಿ ಎಸಳು ಸೇವಿಸುತ್ತಾರೋ ಅವರು ಬೊಜ್ಜಿನ ಸಮಸ್ಯೆಯಿಂದ ಪಾರಾಗಬಹುದು. ಇನ್ನು ಬೆಳ್ಳುಳ್ಳಿ ದೇಹವನ್ನು ಸೇರುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುವುದು.ಬೆಳ್ಳುಳ್ಳಿಯನ್ನು ದಿನನಿತ್ಯದ ಆಹಾರದಲ್ಲಿ ಬಳಸುವುದರಿಂದ ಆಹಾರದ ರುಚಿ ಹೆಚ್ಚುವುದು ಮಾತ್ರವಲ್ಲ, ಈ ಕೆಳಗಿನ ಪ್ರಮುಖ ಪ್ರಯೋಜನಗಳನ್ನು ಪಡೆಯಬಹುದು:

ಬೆಳ್ಳುಳ್ಳಿ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು: ಪ್ರತಿ ದಿನ ಬೆಳ್ಳುಳ್ಳಿಯ ಒಂದು ಸಣ್ಣ ಎಸಳನ್ನು ಜಗಿಯುವುದರಿಂದ ಪಚನಕ್ರಿಯೆ ಚೆನ್ನಾಗಿ ನಡೆದು ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ, ಇದರಿಂದ ಹಸಿವು ಹೆಚ್ಚುತ್ತದೆ. ಹಸಿವು ಕಡಿಮೆ, ಆಗಾಗ ಅಜೀರ್ಣ ಸಮಸ್ಯೆ ಇರುವವರು ಬೆಳ್ಳುಳ್ಳಿ ತಿಂದರೆ ಸಮಸ್ಯೆ ಇಲ್ಲವಾಗುವುದು.ಹೃದಯದ ಸ್ವಾಸ್ಥ್ಯ ಹೆಚ್ಚಿಸುತ್ತದೆ: ಬೆಳ್ಳುಳ್ಳಿಯನ್ನು ತಿನ್ನುವುದರಿಂದ ರಕ್ತಸಂಚಾರ ಸರಾಗವಾಗಿ ನಡೆಯುವುದು, ಇದರಿಂದ ಹೃದಯದ ಆರೋಗ್ಯ ಹೆಚ್ಚುವುದು.

ಕೂದಲು ಹಾಗೂ ಚರ್ಮದ ಆರೋಗ್ಯಕ್ಕೆ ಹೆಚ್ಚಿಸುತ್ತದೆ: ಬೆಳ್ಳುಳ್ಳಿ ತಿನ್ನುವುದರಿಂದ ಇದರಲ್ಲಿರುವ ಪೋಷಕಾಂಶ ಕೂದಲನ್ನು ಆಂತರಿಕವಾಗಿ ಪೋಷಿಸುತ್ತದೆ. ಇನ್ನು ಹುಳಕಡ್ಡಿಯಂಥ ಚರ್ಮ ಸಮಸ್ಯೆವಿದ್ದರೆ ಬೆಳ್ಳುಳ್ಳಿ ರಸ ಹಚ್ಚಿದರೆ ಕಡಿಮೆಯಾಗುವುದು.ಕ್ಯಾನ್ಸರ್ ದೂರವಿಡುತ್ತದೆ: ಬೆಳ್ಳುಳ್ಳಿಯಲ್ಲಿರುವ ಪ್ಲೇವೊನೋಯ್ಡ್ಸ್ ಅಂಶ ಡಿಎನ್ಎಗೆ ಹಾನಿಯಾಗದಂತೆ ಕಾಪಾಡುತ್ತದೆ, ಇದರಿಂದ ಕ್ಯಾನ್ಸರ್‌ ಕಣಗಳು ಉಂಟಾಗುವುದನ್ನು ತಡೆಯುತ್ತದೆ.

https://www.youtube.com/watch?v=1_d9ivjbMiE

ಮಾನಸಿಕ ಒತ್ತಡ ನಿಯಂತ್ರಿಸುವ ಗುಣ ಬೆಳ್ಳುಳ್ಳಿಯಲ್ಲಿದೆ: ಮಾನಸಿಕ ಒತ್ತಡದಿಂದಾಗಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುವುದು. ಬೆಳ್ಳುಳ್ಳಿಯಲ್ಲಿ ಆ್ಯಂಟಿಆಕ್ಸಿಡೆಂಡ್ ಅಂಶ ಹೆಚ್ಚಾಗಿದ್ದು ಇದು ದೇಹದಲ್ಲಿರುವ ಬೇಡದ ರಾಸಾಯನಿಕಗಳನ್ನು ಹೊರಹಾಕುವ ಪ್ರಯತ್ನ ಮಾಡುತ್ತದೆ, ಇದರಿಂದ ಮಾನಸಿಕ ಒತ್ತಡ ಕಡಿಮೆಯಾಗುವುದು.

ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ: ಕೊಲೆಸ್ಟ್ರಾಲ್ ಸಮಸ್ಯೆ ಇರುವವರು ತಮ್ಮ ಆಹಾರಕ್ರಮದಲ್ಲಿ ಬೆಳ್ಳುಳ್ಳಿ ಬಳಸುವುದು ತುಂಬಾ ಒಳ್ಳೆಯದು. ಇನ್ನು ದಿನಾ ಬೆಳಗ್ಗೆ ಎರಡು ಎಸಳು ಹಸಿ ಬೆಳ್ಳುಳ್ಳಿ ತಿನ್ನುವುದರಿಂದ ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿಡಬಹುದು.

ಬೊಜ್ಜು ಕರಗಿಸುತ್ತದೆ: ಮೈ ತೂಕ ಹೆಚ್ಚಾಗಬಾರದು, ಹೊಟ್ಟೆ ಬೊಜ್ಜು ಬರಬಾರದು ಎಂದರೆ ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಎರಡು ಎಸಳು ಬೆಳ್ಳುಳ್ಳಿಯನ್ನು ತಿನ್ನುವುದು ಒಳ್ಳೆಯದು. ದಿನಾ ಅರ್ಧ ಗಂಟೆ ವ್ಯಾಯಾಮ ಹಾಗೂ ಬೆಳಗ್ಗೆ 2 ಎಸಳು ಬೆಳ್ಳುಳ್ಳಿ ತಿಂದು ನೋಡಿ, ನಿಮ್ಮ ಸೊಂಟದ ಗಾತ್ರ ಚಿಕ್ಕದಾಗಿರುವುದು ಗಮನಕ್ಕೆ ಬರುವುದು.ಸಾಂಕ್ರಾಮಿಕ ರೋಗವನ್ನು ತಡೆಗಟ್ಟುತ್ತದೆ: ಬೆಳ್ಳುಳ್ಳಿ ಎಸಳನ್ನು ಬಾಯಲ್ಲಿ ಇಟ್ಟುಕೊಳ್ಳುವುದರಿಂದ ಸಾಂಕ್ರಾಮಿಕ ಜ್ವರ ಮತ್ತು ಉಸಿರಾಟದ ತೊಂದರೆಯಿಂದ ದೂರವಾಗಿರಬಹುದು. ಬೆಳ್ಳುಳ್ಳಿಯಲ್ಲಿರುವ ಆಲೈಸಿನ್‌ ಪೋಷಕಾಂಶ ರಕ್ತದಲ್ಲಿ ಟ್ರೈಗ್ಲಿಸರೈಡ್‌ ಪ್ರಮಾಣವನ್ನು ನಿಯಂತ್ರಿಸುತ್ತದೆ.

ಬೆಳ್ಳುಳ್ಳಿ ರಕ್ತವನ್ನು ಶುದ್ಧೀಕರಿಸುತ್ತದೆ: ಬೆಳ್ಳುಳ್ಳಿ ತಿನ್ನುವುದರಿಂದ ಇದರಲ್ಲಿರುವ ಆ್ಯಂಟಿಆಕ್ಸಿಡೆಂಡ್ ದೇಹದಲ್ಲಿರುವ ಬೇಡದ ರಾಸಾಯನಿಕಗಳನ್ನು ಹೊರಹಾಕುವುದರಿಂದ ರಕ್ತವು ಶುದ್ಧವಾಗುತ್ತದೆ. ಇನ್ನು ಬೆಳ್ಳುಳ್ಳಿಯಲ್ಲಿರುವ ಅಜೊನೆ ಎಂಬ ರಾಸಾಯನಿಕ ದೇಹದೊಳಗೆ ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ. ಇದರಿಂದ ಹೃದಯದ ಆರೋಗ್ಯ ಹೆಚ್ಚುವುದು.ರಕ್ತಹೀನತೆ ಸಮಸ್ಯೆ ಹೋಗಲಾಡಿಸುತ್ತದೆ: ದೇಹದಲ್ಲಿ ಕಬ್ಬಿಣದಂಶದ ಕೊರತೆಯಿಂದ ರಕ್ತಹೀನತೆ ಉಂಟಾಗುವುದು, ಇದರಿಂದ ನಿಶ್ಯಕ್ತಿ ಉಂಟಾಗುವುದು.ರಕ್ತಹೀನತೆ ಸಮಸ್ಯೆಗೆ ಸೂಕ್ತ ಚಿಕಿತ್ಸೆ ಅಗ್ಯತ, ಇದರ ಜತೆಗೆ ಒಂದು ಎಸಳು ಬೆಳ್ಳುಳ್ಳಿ ಎಸಳನ್ನು ಬಾಯಲ್ಲಿ ಇಟ್ಟುಕೊಳ್ಳುವುದರಿಂದ ಬೆಳ್ಳುಳ್ಳಿ ರಸ ಬೆಳ್ಳುಳ್ಳಿಯನ್ನು ಸೇರುವುದು, ಹೀಗೆ ಮಾಡುವುದರಿಂದ ರಕ್ತಹೀನತೆ ಸಮಸ್ಯೆ ಬೇಗನೆ ಕಡಿಮೆಯಾಗುವುದು.

ಬೆಳ್ಳುಳ್ಳಿಯನ್ನು ಹೇಗೆ ತಿಂದರೆ ಹೆಚ್ಚು ಆರೋಗ್ಯಕರ?-ಬೆಳ್ಳುಳ್ಳಿಯನ್ನು ಬೇಯಿಸಿ ತಿನ್ನುವುದಕ್ಕಿಂತ ಹಸಿ ತಿಂದರೆ ಹೆಚ್ಚು ಆರೋಗ್ಯಕರ, ಬೆಳ್ಳುಳ್ಳಿಯನ್ನು ಬೇಯಿಸುವುದರಿಂದ ಇದರಲ್ಲಿರುವ ಆಲಿಸಿನ್ ಪ್ರಬಲ ಕಡಿಮೆಯಾಗುವುದು. ಹಸಿ ಬೆಳ್ಳುಳ್ಳಿಯನ್ನು ಹಾಗೇ ತಿನ್ನಲು ಕಷ್ಟವಾದರೆ ಸಲಾಡ್ ಅಥವಾ ಚಟ್ನಿಯಲ್ಲಿ ಬಳಸಬಹುದು.

ಬೆಳ್ಳುಳ್ಳಿಯನ್ನು ಈ ಸಮಸ್ಯೆಗಳಿಗೆ ಮನೆಮದ್ದಾಗಿ ಬಳಸಬಹುದು:ನೆಗಡಿ, ಜ್ವರ ಹೋಗಲಾಡಿಸಲು ಮನೆಮದ್ದುಸಣ್ಣ-ಪುಟ್ಟ ಶೀತ, ಕೆಮ್ಮು, ಸಾಮಾನ್ಯ ಜ್ವರಕ್ಕೆಇಂಗ್ಲಿಷ್‌ ಮಾತ್ರೆಗಳನ್ನು ನುಂಗುವುದಕ್ಕಿಂತ ಮನೆಯಲ್ಲೇ ಸಿಗುವ ವಸ್ತುಗಳನ್ನು ಬಳಸಿಕೊಂಡು ಸಾಮಾನ್ಯವಾಗಿ ಬರುವ ಜ್ವರವನ್ನು ಹೋಗಲಾಡಿಸಬಹುದು.
ಮನೆಮದ್ದು ಮಾಡುವುದು ಹೇಗೆ?ಎರಡು ಲೋಟ ನೀರನ್ನು ಕುದಿಸಿ ಅದಕ್ಕೆ ಅರ್ಧ ಈರುಳ್ಳಿ, ನಾಲ್ಕು ಬೆಳ್ಳುಳ್ಳಿ ಎಸಳು ಹಾಕಿ ಕುದಿಸಿ, ಅದಕ್ಕೆ ನಿಂಬೆರಸವನ್ನು ಸೇರಿಸಿ.ಈ ಮದ್ದನ್ನು ಬೆಳಗ್ಗೆ ಉಪಹಾರ ಮಾಡಿದ ನಂತರ ಹಾಗೂ ರಾತ್ರಿ ಊಟದ ಸೇವಿಸಿ. ಇದರಿಂದ ಬೇಗನೆ ಜ್ವರ ಮತ್ತು ನೆಗಡಿ, ಕೆಮ್ಮು ಕಡಿಮೆಯಾಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ,

ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ತೂಕ ಇಳಿಕೆಗೆ ಬೆಳ್ಳುಳ್ಳಿಯನ್ನು ಮನೆಮದ್ದಾಗಿ ಬಳಸುವುದು ಹೇಗೆ?ಬೆಳ್ಳುಳ್ಳಿಯಲ್ಲಿ ವಿಟಮಿನ್‌ ಬಿ6 ಮತ್ತು ಸಿ, ನಾರಿನಂಶ, ಕ್ಯಾಲ್ಸಿಯಂ, ಮ್ಯಾಂಗನೀಸ್, 617ಮಿ.ಗ್ರಾಂ ಸೋಡಿಯಂ, 14ಗ್ರಾಂ ಕಾರ್ಬೋಹೈಡ್ರೇಟ್‌, 35.2ಗ್ರಾಂ ಪ್ರೊಟೀನ್‌, 22% ಕಬ್ಬಿಣದಂಶ, 13.8 ಕೊಬ್ಬಿನಂಶವಿದ್ದು ಇದರ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು.ತೂಕ ಇಳಿಕೆಗೆ ಈ ರೀತಿ ಬಳಸಿ

ಟಿಪ್ಸ್ 1–ಮುಂಜಾನೆ 2-3 ಎಸಳು ಬೆಳ್ಳುಳ್ಳಿಯನ್ನು ಜಜ್ಜಿ10 ನಿಮಿಷ ಹಾಗೇ ಇಟ್ಟು ನಂತರ ಖಾಲಿ ಹೊಟ್ಟೆಯಲ್ಲಿ ಸೇವಿಸಿ ಒಂದು ಲೋಟ ಬಿಸಿ ನೀರು ಕುಡಿಯಿರಿ.ಟಿಪ್ಸ್‌ 2==2-3 ಎಸಳು ಬೆಳ್ಳುಳ್ಳಿಯನ್ನು ಜಜ್ಜಿ 1 ಚಮಚ ಜೇನು ಜತೆ ಮಿಶ್ರ ಮಾಡಿ ಸೇವಿಸಿ.ಈ ಎರಡು ವಿಧಾನದಲ್ಲಿ ನಿಮಗೆ ಸೂಕ್ತವಾದ ವಿಧಾನವನ್ನು ಬಳಸಿ, ಇದರಿಂದ ಮೈ ತೂಕ ಕಡಿಮೆಯಾಗುವುದು.ಸೂಚನೆ: ದಿನಕ್ಕೆ 2-3 ಎಸಳು ಬೆಳ್ಳುಳ್ಳಿಯಷ್ಟೇ ಸೇವಿಸಿ.

ಹಲ್ಲುನೋವಿಗೆ ಮನೆಮದ್ದು-ಹಲ್ಲುನೋವು ಬಂದರೆ ಅದನ್ನು ತಡೆದುಕೊಳ್ಳುವುದು, ಇನ್ನು ಹಲ್ಲುನೋವು ರಾತ್ರಿ ಹೊತ್ತಿನಲ್ಲಿ ಕಾಣಿಸಿದರೆ ಆ ರಾತ್ರಿಯಲ್ಲಿ ದಂತವೈದ್ಯರು ಸಿಗುವುದು ಅಪರೂಪ. ಇಂಥ ಸಂದರ್ಭದಲ್ಲಿ ಹಲ್ಲಿನೋವಿನ ತಾತ್ಕಾಲಿಕ ಶಮನಕ್ಕಾಗಿ ಮನೆಮದ್ದು ಮಾಡುವುದು ಒಳ್ಳೆಯದು.
ಹಲ್ಲುನೋವು ಹಲ್ಲಿನ ಒಸಡುಗಳಲ್ಲಿ ಉಳಿದ ಆಹಾರ ಕೊಳೆತು ಉಂಟಾಗುವ ಬ್ಯಾಕ್ಟಿರಿಯಾದಿಂದ ಉಂಟಾಗುತ್ತದೆ. ಬೆಳ್ಳುಳ್ಳಿಯಲ್ಲಿರುವ ಆ್ಯಂಟಿಆಕ್ಸಿಡೆಂಡ್ ಈ ಬ್ಯಾಕ್ಟಿರಿಯಾಗಳನ್ನು ಕೊಲ್ಲುವುದರಿಂದ ನೋವು ಕಡಿಮೆಯಾಗುವುದು.
ಮನೆಮಮದ್ದು ಮಾಡುವುದು ಹೇಗೆ?ಬೆಳ್ಳುಳ್ಳಿಯ ಕೆಲವು ಎಸಳುಗಳನ್ನು ನುಣ್ಣನೆ ಅರಿದು ಅದನ್ನು ಪೇಸ್ಟ್‌ ರೀತಿಯಲ್ಲಿ ಬಳಸಿ, ಇದಕ್ಕೆ ಸ್ವಲ್ಪ ಉಪ್ಪು ಸೇರಿಸಿದರೆ ಒಳ್ಳೆಯದು. ಹೀಗೆ ಮಾಡುವಾಗ ಬಾಯಲ್ಲಿ ಉರಿ ಉಂಟಾದರೂ ಆ ಉರಿ ಕಡಿಮೆಯಾಗುವುದು ಹಾಗೂ ನೋವು ಕೂಡ ಕಡಿಮೆಯಾಗುವುದು.

ಅತಿಯಾದರೆ ಯಾವುದೂ ಒಳ್ಳೆಯದಲ್ಲ, ಬೆಳ್ಳುಳ್ಳಿ ಆರೋಗ್ಯಕ್ಕೆ ಒಳ್ಳೆಯದೆಂದು ಹೆಚ್ಚು ತಿಂದರೆ ಈ ರೀತಿಯ ಅಡ್ಡಪರಿಣಾಮ ಉಂಟಾಗುತ್ತದೆ:ಯಕೃತ್ತಿಗೆ ಒಳ್ಳೆಯದಲ್ಲ-ಯಕೃತ್ತು ನಮ್ಮ ದೇಹದ ಪ್ರಮುಖ ಅಂಗವಾಗಿದ್ದು, ರಕ್ತ ಶುದ್ಧೀಕರಣ, ಕೊಬ್ಬು ಚಯಾಪಚಯ ಕ್ರಿಯೆ, ಪ್ರೋಟೀನ್ ಚಯಾಪಚಯ ಕ್ರಿಯೆ ಹಾಗೂ ನಿಮ್ಮ ದೇಹದಿಂದ ಅಮೋನಿಯಾವನ್ನು ತೆಗೆದುಹಾಕುತ್ತದೆ. ಆದರೆ, ಬೆಳ್ಳುಳ್ಳಿಯನ್ನು ಅಧಿಕ ಪ್ರಮಾಣದಲ್ಲಿ ಸೇವಿಸಿದರೆ ಅಲ್ಲಿಸಿನ್ ಅಂಶದಿಂದ ಪಿತ್ತಜನಕಾಂಗಕ್ಕೆ ನಂಜುಂಟಾಗಬಹುದು.ಅತಿಸಾರ ಉಂಟಾಗುವುದು-ಖಾಲಿ ಹೊಟ್ಟೆಯಲ್ಲಿ ಹೆಚ್ಚು ಬೆಳ್ಳುಳ್ಳಿ ತಿಂದರೆ ಇದರಲ್ಲಿರುವ ಸಲ್ಫರ್‌ ಅಂಶಗಳಿಂದ ಅತಿಸಾರ ಉಂಟಾಗುವುದು.ವಾಕರಿಕೆ, ಎದೆಯುರಿ ಕಾಣಿಸುವುದು-ಹಸಿ ಬೆಳ್ಳುಳ್ಳಿಯನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಎದೆಯುರಿ, ವಾಕರಿಕೆ ಹಾಗೂ ವಾಂತಿ ಉಂಟಾಗಬಹುದು ಆದ್ದರಿಂದ ಮಿತಿಯಲ್ಲಿ ತಿನ್ನಿ.

ರಕ್ತತೆಳುಗೊಳಿಸುವ ಔಷಧಿ ಜತೆ ಸೇವಿಸಬಾರದು-ಬೆಳ್ಳುಳ್ಳಿ ನೈಸರ್ಗಿಕವಾಗಿ ರಕ್ತವನ್ನು ತೆಳ್ಳಗೆ ಮಾಡುವುದರಿಂದ ಬೆಳ್ಳುಳ್ಳಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯುವಲ್ಲಿ ಸಹಕಾರಿ, ಆದ್ದರಿಂದವಾರ್ಫರಿನ್, ಆ್ಯಸ್ಪಿರಿನ್ ಮುಂತಾದ ರಕ್ತ ತೆಳುಗೊಳಿಸುವ ಔಷಧಿಗಳ ಜತೆಗೆ ಹೆಚ್ಚು ಬೆಳ್ಳುಳ್ಳಿ ಸೇವಿಸಬಾರದು. ಅದರಿಂದ ರಕ್ತಸ್ರಾವ ಉಲ್ಬಣಿಸುವ ಅಪಾಯ ಹೆಚ್ಚಾಗಬಹುದು.ಬೆವರು ಹೆಚ್ಚಾಗುತ್ತದೆಬೆಳ್ಳುಳ್ಳಿಯನ್ನು ದೀರ್ಘಕಾಲ ಸಮಯ ಸೇವಿಸಿದರೆ ಬೆವರು ಹೆಚ್ಚಾಗಬಹುದೆಂದು ಹಲವು ವೈದ್ಯಕೀಯ ಅಧ್ಯಯನಗಳಲ್ಲಿ ಬಹಿರಂಗಗೊಂಡಿವೆ.

ಎಚ್ಚರಿಕೆ–1. ಅಸ್ತಮಾ ಕಾಯಿಲೆ ಇರುವವರು ತಿನ್ನಲೇ ಬಾರದು, ಕಾರಣ ಇದು ಅಡ್ಡ ಪರಿಣಾಮ ಬೀರಬಹುದು
2. ಶಸ್ತ್ರಚಿಕಿತ್ಸೆ ಮೊದಲು ಮತ್ತು ಬಳಿಕ ಬೆಳ್ಳುಳ್ಳಿಯನ್ನು ಸೇವಿಸಲೇ ಬಾರದು.
ವೈದ್ಯರ ಸಲಹೆ ಇಲ್ಲದೆ ದಿನಕ್ಕೆ 3, 4 ಎಸಳನ್ನು ತಿನ್ನಲೇ ಬೇಡಿ.

Related Post

Leave a Comment