ಪಿತೃಪಕ್ಷ ವಿಶೇಷ/ಎಂತಹ ವ್ಯಕ್ತಿಗಳಿಗೆ ಪಿತೃ ದೋಷವಿರುತ್ತೆ? ಅವರ ಜೀವನ ಹೇಗಿರತ್ತೆ..?

Written by Anand raj

Published on:

ಪಿತೃ ದೋಷವನ್ನು ನಿವಾರಿಸಿಕೊಳ್ಳಲು ಭಾದ್ರಪದ ಮಾಸದ ಕೃಷ್ಣ ಪಕ್ಷದ ಪಿತೃ ಪಕ್ಷದ ಅವಧಿಯು ಅತ್ಯಂತ ಉಪಯುಕ್ತವಾಗಿದೆ.ಭಾದ್ರಪದ ತಿಂಗಳ ಕೃಷ್ಣ ಪಕ್ಷದ ಈ ಸಮಯವು ಪೂರ್ವಜರಿಗೆ ನಿಜವಾದ ಗೌರವವನ್ನು ವ್ಯಕ್ತಪಡಿಸುವ 15 ದಿನಗಳ ಶ್ರಾದ್ಧ ಪಕ್ಷವಾಗಿದೆ ಈ ದಿನಗಳಲ್ಲಿ ಪೂರ್ವಜರ ಶ್ರಾದ್ಧವನ್ನು ಬಹುತೇಕ ಎಲ್ಲಾ ಮನೆಗಳಲ್ಲಿ ಮಾಡಲಾಗುತ್ತದೆ. ಇದನ್ನು ಮಾಡುವುದರಿಂದ, ಪೂರ್ವಜರ ಆತ್ಮಗಳು ತೃಪ್ತಿ ಹೊಂದುತ್ತವೆ ಮತ್ತು ತಮ್ಮ ಕುಟುಂಬವನ್ನು ಸಂತೋಷ ಮತ್ತು ಸಮೃದ್ಧಿಯಿರುವಂತೆ ಆಶೀರ್ವಾದವನ್ನು ಮಾಡುತ್ತಾರೆ. ಪಿತೃ ದೋಷವನ್ನು ತೊಡೆದುಹಾಕಲು ಈ ಸಮಯವನ್ನು ತುಂಬಾ ಉಪಯುಕ್ತವೆಂದು ಪರಿಗಣಿಸಲಾಗುತ್ತದೆ. ಪಿತೃ ದೋಷ ಎಂದರೇನ..? ಅದರ ಲಕ್ಷಣಗಳು ಮತ್ತು ಕಾರಣಗಳು ಏನು ಎನ್ನುವುದನ್ನು ತಿಳಿಸಿಕೊಡುತ್ತೇವೆ…

​1. ಪಿತೃ ದೋಷ ಎಂದರೇನು..?ಒಬ್ಬ ವ್ಯಕ್ತಿಯ ಮರಣದ ನಂತರ, ಆತನ ಅಂತ್ಯ ಸಂಸ್ಕಾರವನ್ನು ವಿಧಿ – ವಿಧಾನಗಳಿಂದ ಮಾಡದಿದ್ದರೆ, ಅಥವಾ ಯಾರಾದರೂ ಅಕಾಲಿಕ ಮರಣ ಹೊಂದಿದರೆ, ಆ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿರುವ ಕುಟುಂಬ ಸದಸ್ಯರು ಹಲವು ತಲೆಮಾರುಗಳಿಂದ ಪಿತೃ ದೋಷದ ಭಾರವನ್ನು ಅನುಭವಿಸಬೇಕಾಗುತ್ತದೆ. ಇದರೊಂದಿಗೆ, ಪಿತೃ ದೋಷದ ಅಹಿತಕರ ಪರಿಣಾಮಗಳಿಂದ ದೂರವಿರಲು ಜೀವನದುದ್ದಕ್ಕೂ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

​2. ಪಿತೃ ದೋಷದ ಲಕ್ಷಣಗಳುಪಿತ್ರ ದೋಷದಿಂದಾಗಿ, ವ್ಯಕ್ತಿಯು ತನ್ನ ಜೀವನದಲ್ಲಿ ಮಕ್ಕಳ ಸಂತೋಷವನ್ನು ಪಡೆಯುವುದಿಲ್ಲ. ಒಂದು ವೇಳೆ ಮಕ್ಕಳು ಜನಿಸಿದರೂ ಅವರು ವಿಕಲಚೇತನರಾಗುತ್ತಾರೆ ಅಥವಾ ಗುಣಹೀನನಾಗಿರುತ್ತಾನೆ. ಅಥವಾ ಹಲವು ಬಾರಿ ಮಗು ಜನಿಸಿದ ತಕ್ಷಣ ಸಾಯುತ್ತದೆ.ಕೆಲಸ ಮತ್ತು ವ್ಯವಹಾರದಲ್ಲಿ ಕಷ್ಟಪಟ್ಟು ಕೆಲಸ ಮಾಡಿದರೂ, ನಷ್ಟಗಳು ಸಂಭವಿಸುತ್ತಲೇ ಇರುತ್ತವೆ.ಕುಟುಂಬದಲ್ಲಿ ಆಗಾಗ್ಗೆ ಭಿನ್ನಾಭಿಪ್ರಾಯವಿದೆ ಅಥವಾ ಏಕತೆ ಇರುವುದಿಲ್ಲ ಹಾಗೂ ಕುಟುಂಬದಲ್ಲಿ ಶಾಂತಿಯ ಕೊರತೆಯಿರುತ್ತದೆ.

ಕುಟುಂಬದಲ್ಲಿ ನಿರಂತರವಾಗಿ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಚಿಕಿತ್ಸೆ ಪಡೆದ ನಂತರವೂ ಸುಧಾರಿಸಿಕೊಳ್ಳಲು ಸಾಧ್ಯವಿರುವುದಿಲ್ಲ.ಕುಟುಂಬದಲ್ಲಿ ವಿವಾಹ ಕಾರ್ಯ ನಡೆಯದೇ ಇರುವುದು ಅಥವಾ ಮದುವೆಯಾದ ನಂತರ ವಿಚ್ಛೇದನ ಪಡೆಯುವುದು ಅಥವಾ ಪತಿ – ಪತ್ನಿ ದೂರಾಗುವುದು.ಹೆಚ್ಚಾಗಿ ಮೋಸಕ್ಕೆ ಬಲಿಯಾಗುತ್ತಾರೆ.ಪಿತೃ ದೋಷದಿಂದಾಗಿ, ಒಬ್ಬ ವ್ಯಕ್ತಿಯು ಮತ್ತೆ ಮತ್ತೆ ಅಪಘಾತಗಳಿಗೆ ಬಲಿಯಾಗುತ್ತಾನೆ.ದೆವ್ವ – ಭೂತಗಳಿಂದ ಪ್ರಭಾವಿತರಾಗುತ್ತಾರೆ.

​3. ಪಿತೃ ದೋಷಕ್ಕೆ ಕಾರಣಪೂರ್ವಜರಿಗೆ ಸರಿಯಾಗಿ ಅಂತ್ಯಕ್ರಿಯೆ ಮಾಡದಿರುವುದು ಮತ್ತು ಶ್ರಾದ್ಧ ಮಾಡದಿರುವುದು.ಪೂರ್ವಜರನ್ನು ಮರೆಯುವುದು ಅಥವಾ ಅವಮಾನಿಸುವುದು.ಧರ್ಮದ ವಿರುದ್ಧ ವರ್ತಿಸುವುದು.ಅರಳಿ ಮರ, ಬೇವು ಮತ್ತು ಆಲದ ಮರಗಳನ್ನು ಕತ್ತರಿಸುವುದು.ಹಾವನ್ನು ಕೊಲ್ಲುವುದು ಅಥವಾ ಕೊಲ್ಲಿಸುವುದು.

​4. ಈ ಪರಿಹಾರಗಳನ್ನು ಪ್ರಯತ್ನಿಸಿಜಾತಕದಲ್ಲಿ ಪಿತೃ ದೋಷವಿದ್ದರೆ, ದಕ್ಕಿಣ ದಿಕ್ಕಿನಲ್ಲಿ ಪೂರ್ವಜರ ಫೋಟೋವನ್ನಿಟ್ಟು ಪ್ರತಿನಿತ್ಯ ಹೂಮಾಲೆ ಹಾಕಬೇಕು.ಪೂರ್ವಜರ ಸಾವಿನ ದಿನದಂದು, ಬ್ರಾಹ್ಮಣರಿಗೆ ಗೌರವದಿಂದ ಆಹಾರ ನೀಡಿ ಮತ್ತು ಸಾಧ್ಯವಾದಷ್ಟು ದಾನ ಮಾಡಿ.ಮಧ್ಯಾಹ್ನ ಮನೆ ಸಮೀಪದ ಅರಳಿ ಮರಕ್ಕೆ ನೀರು ನೀಡಿ. ಹೂವು, ಅಕ್ಷತೆ, ಹಾಲು, ಗಂಗಾಜಲ ಮತ್ತು ಕಪ್ಪು ಎಳ್ಳನ್ನು ನೀಡಿ ಪೂರ್ವಜರನ್ನು ನೆನಪಿಸಿಕೊಳ್ಳಿ.ಪ್ರತಿದಿನ ಸಂಜೆ ದಕ್ಷಿಣ ದಿಕ್ಕಿನಲ್ಲಿ ದೀಪ ಬೆಳಗಿಸಿ. ನೀವು ಇದನ್ನು ಪ್ರತಿದಿನ ಮಾಡಲು ಸಾಧ್ಯವಾಗದಿದ್ದರೆ, ಕನಿಷ್ಠ ಪಕ್ಷ ಅದನ್ನು ಪಿತೃಗಳು ಮರಣ ಹೊಂದಿದ ದಿನ ಮಾಡಬೇಕು. ‘ಜಾತಕದಲ್ಲಿ ಪಿತ್ರ ದೋಷವನ್ನು ತೆಗೆದುಹಾಕಲು, ನೀವು ಬಡ ಹುಡುಗಿಯನ್ನು ಮದುವೆಯಾಗುವ ಮೂಲಕ ಅಥವಾ ಮದುವೆಗೆ ಸಹಾಯ ಮಾಡುವ ಮೂಲಕ ಪ್ರಯೋಜನ ಪಡೆಯುತ್ತೀರಿ.

​5. ಕನಸಿನಲ್ಲಿ ಪೂರ್ವಜರು ಕಾಣಿಸಿಕೊಳ್ಳುವುದು-ಕೆಲವು ಜನರು ತಮ್ಮ ಕನಸಿನಲ್ಲಿ ಪೂರ್ವಜರನ್ನು ಅಥವಾ ಪಿತೃಗಳನ್ನು ನೋಡುತ್ತಾರೆ. ಕನಸಿನಲ್ಲಿ ನೀವು ಮರಣ ಹೊಂದಿದ ಕುಟುಂಬದ ವ್ಯಕ್ತಿಯನ್ನು ನೋಡಿದರೆ ಅದು ನಿಮ್ಮ ಪೂರ್ವಜರ ಕೋಪವನ್ನು ಸೂಚಿಸುತ್ತದೆ. ಪದೇ ಪದೇ ಕನಸಿನಲ್ಲಿ ನೀವು ಪೂರ್ವಜರನ್ನು ನೋಡಿದರೆ ನಿಮ್ಮ ಪೂರ್ವಜರ ಆತ್ಮವು ಅತೃಪ್ತವಾಗಿದೆ ಎಂದರ್ಥ. ನಿಮ್ಮ ಪೂರ್ವಜರ ಬಯಕೆಗಳು ಅಪೂರ್ಣಗೊಂಡಿದ್ದರೆ ಮಾತ್ರ ನಿಮ್ಮ ಕನಸಿನಲ್ಲಿ ಆಗಾಗ ಮರಣ ಹೊಂದಿದ ಪೂರ್ವಜರು ಕಾಣಿಸಿಕೊಳ್ಳುತ್ತಾರೆ. ಒಂದು ವೇಳೆ ನಿಮಗೆ ಈ ಕನಸುಗಳು ಬಿದ್ದರೆ ತಡ ಮಾಡದೇ ನಿಮ್ಮ ಕನಸಿನಲ್ಲಿ ಯಾವ ಪೂರ್ವಜರು ಕಾಣಿಸಿಕೊಂಡಿರುತ್ತಾರೋ ಅವರಿಗೆ ಇಷ್ಟವಾದ ವಸ್ತುಗಳನ್ನು ದಾನ ಮಾಡಿ.

Related Post

Leave a Comment