ಹೆಸರು ಕಾಳು ಶುಗರ್ ಇದ್ದವರು ಇವತ್ತೇ ಸೇವಿಸಿ!

Written by Anand raj

Published on:

ಪ್ರತಿ ಮನೆಯಲ್ಲಿಯೂ ಸರಳವಾಗಿ ನೆನೆಸಿಟ್ಟು ಹಸಿಯಾಗಿಯೇ ತಿನ್ನಬಹುದಾದ ಕೊಂಚ ಹೊತ್ತಿನಲ್ಲಿಯೇ ಬೆಂದು ಸ್ವಾದಿಷ್ಟ ಧಾಲ್ ಸಿದ್ಧಪಡಿಸಬಹುದಾದ ಕಾರಣಕ್ಕೇ ಹೆಚ್ಚಿನ ಗೃಹಿಣಿಯರು ತೊಗರಿಬೇಳೆಯ ಬದಲಿಗೆ ಹೆಸರುಬೇಳೆಯನ್ನು ಆಯ್ದುಕೊಳ್ಳುತ್ತಾರೆ ಆದರೆ ವಾಸ್ತವದಲ್ಲಿ ಹೆಸರುಬೇಳೆ ಈ ಗುಣಗಳಿಗೂ ಮಿಗಿಲಾದ ಆರೋಗ್ಯಕರ ಗುಣಗಳನ್ನು ಪಡೆದಿದೆ ಹೆಸರುಬೇಳೆ ಭಾರತದಲ್ಲಿ ಸಾವಿರಾರು ವರ್ಷಗಳಿಂದ ಬಳಕೆಯಲ್ಲಿದ್ದು ಪ್ರಾಚೀನ ಆಯುರ್ವೇದದಲ್ಲಿಯೂ ಉಲ್ಲೇಖಿಸಲ್ಪಟ್ಟಿದೆ ದಾಖಲೆಗಳ ಪ್ರಕಾರ ಕ್ರಿಸ್ತಪೂರ್ವ 1500 ಇಸವಿಗೂ ಮುನ್ನ ಬಳಸಲ್ಪಡುತ್ತಿದೆ ಹಾಗಾದರೆ ಬನ್ನಿ ಹೆಸರುಬೇಳೆ ಸೇವನೆಯ ಆರೋಗ್ಯದ ಪ್ರಯೋಜನಗಳನ್ನು ತಿಳಿದುಕೊಳ್ಳೋಣ ನಿತ್ಯದ ಆಹಾರ ಸೇವನೆಯಲ್ಲಿ ಕೊಂಚ ಹೆಸರು ಬೇಳೆಯನ್ನು ಅಳವಡಿಸಿಕೊಳ್ಳುವುದರಲ್ಲಿ ಜಾಣತನವಿದೆ ಏಕೆಂದರೆ.

ಈ ಮೂಲಕ ಹಲವು ಬಗೆಯ ಪೋಷಕಾಂಶ ಗಳನ್ನು ದೇಹ ಪಡೆಯುತ್ತದೆ ಅವುಗಳಲ್ಲಿ ಪ್ರಮುಖವಾದವುಗಳೆಂದರೆ ತೂಕ ಇಳಿಕೆಗೆ ನೆರವಾಗುತ್ತದೆ ಹೆಸರುಬೇಳೆಯ ಸೇವನೆಯಿಂದ ದೇಹದಲ್ಲಿ (Cholecystokinin) ಎಂಬ ರಸದೂತ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ ಪರಿಣಾಮವಾಗಿ ಹೊಟ್ಟೆ ಹೆಚ್ಚು ಹೊತ್ತು ತುಂಬಿದ ಭಾವನೆ ಪಡೆಯುತ್ತದೆ ಹಾಗೂ ಜೀವ ರಾಸಾಯನಿಕ ಕ್ರಿಯೆಯೂ ಉತ್ತಮಗೊಳ್ಳುತ್ತದೆ ತನ್ಮೂಲಕ ತೂಕ ಇಳಿಸುವ ಪ್ರಯತ್ನಗಳಿಗೆ ಹೆಚ್ಚಿನ ಫಲ ದೊರಕುತ್ತದೆ ಅಷ್ಟೇ ಅಲ್ಲದೆ ಈ ಹಳದಿ ಬೇಳೆಯಲ್ಲಿ ಪೊಟ್ಯಾಶಿಯಂ ಮತ್ತು ಕಬ್ಬಿಣ ಉತ್ತಮ ಪ್ರಮಾಣದಲ್ಲಿವೆ ಇವು ಅಧಿಕ ರಕ್ತದೊತ್ತಡವನ್ನು ತಗ್ಗಿಸಿ ಸ್ನಾಯುಗಳ ಸೆಳೆತವನ್ನು ತಡೆಯುತ್ತದೆ ಅಷ್ಟೇ ಅಲ್ಲದೇ ಹೃದಯದ ಬಡಿತದ ಲಯ ಏರುಪೇರಾಗದಂತೆ ರಕ್ಷಿಸುತ್ತದೆ ಈ ಬೇಳೆ ಕೇವಲ ಬೇಯಲು ಮಾತ್ರ ಸುಲಭವಲ್ಲ ಜೀರ್ಣಿಸಿಕೊಳ್ಳಲು.

ಅತಿ ಸುಲಭವಾಗಿದೆ ಹಾಗಾಗಿ ಅಧಿಕ ರಕ್ತದೊತ್ತಡ ಇರುವ ವ್ಯಕ್ತಿಗಳಿಗೆ ಈ ಬೇಳೆ ಹೇಳಿ ಮಾಡಿಸಿದ ಅಹಾರವಾಗಿದೆ ಇನ್ನು ಹೆಸರುಬೇಳೆ ಕಡಿಮೆ ಗ್ಲೈಸೆಮಿಕ್ ಗುಣಾಂಕವನ್ನು ಹೊಂದಿದೆ ಅಂದರೆ ಈ ಆಹಾರಗಳು ಸುಲಭವಾಗಿ ಜೀರ್ಣಗೊಂಡು ರಕ್ತದಲ್ಲಿ ಇನ್ಸುಲಿನ್ ಪ್ರಮಾಣವನ್ನು ತಗ್ಗಿಸುತ್ತವೆ ಹಾಗೂ ರಕ್ತದಲ್ಲಿ ಗ್ಲುಕೋಸ್ ಮತ್ತು ಕೊಬ್ಬಿನ ಮಟ್ಟಗಳನ್ನು ಸರಿಪಡಿಸುತ್ತವೆ ತನ್ಮೂಲಕ ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಕಡಿಮೆ ಇರಿಸುವ ಮೂಲಕ ಮಧುಮೇಹ ಎದುರಾಗುವ ಸಾಧ್ಯತೆಯನ್ನು ತಗ್ಗಿಸುತ್ತದೆ ಅಷ್ಟೇ ಅಲ್ಲದೆ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ
ಹೆಸರುಬೇಳೆ ಜೀರ್ಣಿಸಿಕೊಳ್ಳುವಾಗ ಜೀರ್ಣಾಂಗಗಳಲ್ಲಿ ಬ್ಯೂಟರೈಟ್ ಎಂಬ ಕೊಬ್ಬಿನ ಆಮ್ಲ ಉತ್ಪತ್ತಿಯಾಗುತ್ತದೆ ಇದು ವಿಶೇಷವಾಗಿ ಕರುಳುಗಳ ಒಳಗೋಡೆಗೆ ಹೆಚ್ಚಿನ ಪ್ರಯೋಜನ ನೀಡುತ್ತದೆ ಹೆಸರುಬೇಳೆಯಲ್ಲಿರುವ ಉರಿಯೂತ ನಿವಾರಕ ಗುಣ ಜೀರ್ಣಾಂಗಗಳಲ್ಲಿ ವಾಯು ಉತ್ಪತ್ತಿಯಾಗದಂತೆ ತಡೆಯುತ್ತದೆ ಅಲ್ಲದೇ ಸುಲಭವಾಗಿ ಜೀರ್ಣವಾಗುವ ಕಾರಣ ಹೆಚ್ಚಿನ ಶ್ರಮವಿಲ್ಲದೇ.

ಜೀರ್ಣಕ್ರಿಯೆ ಪೂರ್ಣಗೊಳ್ಳುತ್ತದೆ ಇನ್ನು ನಮ್ಮ ರಕ್ತದ ಕೆಂಪು ಕಣಗಳಿಗೆ ಅಗತ್ಯವಾಗಿ ಬೇಕಾಗಿರುವ ಅಂಶವೆಂದರೆ ಕಬ್ಬಿಣ ಕಬ್ಬಿಣದ ಕೊರತೆಯಿಂದ ರಕ್ತಹೀನತೆ ಎದುರಾಗುತ್ತದೆ ಹಾಗೂ ಒಟ್ಟಾರೆ ರಕ್ತಪರಿಚಲನೆ ಬಾಧೆಗೊಳ್ಳುತ್ತದೆ ಹೆಸರುಬೇಳೆಯಲ್ಲಿರುವ ಕಬ್ಬಿಣ ಈ ಕೊರತೆಯನ್ನು ನೀಗಿಸಿ ಉತ್ತಮ ರಕ್ತಪರಿಚಲನೆ ಪಡೆಯಲು ನೆರವಾಗುತ್ತದೆ ಅಷ್ಟೇ ಅಲ್ಲದೆ ಹೆಸರುಬೇಳೆಯಲ್ಲಿರುವ ಹೋರಾಡುವ ಶಕ್ತಿಯುಳ್ಳ ಪೋಷಕಾಂಶಗಳು ಉರಿಯೂತ ನಿವಾರಕ ಮತ್ತು ಸೂಕ್ಷ್ಮಜೀವಿ ನಿವಾರಕ ಗುಣಗಳು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ ಹಾಗೂ ಹಲವಾರು ಮಾರಕ ಬ್ಯಾಕ್ಟೀರಿಯಾ ಮತ್ತು ವೈರಸ್ ಗಳ ದಾಳಿಯಿಂದ ರಕ್ಷಿಸುತ್ತವೆ ಇದರಿಂದ ಶೀತ ಕೆಮ್ಮು ಚರ್ಮ ಕೆಂಪಗಾಗುವುದು ಮೊದಲಾದವುಗಳಿಂದ ರಕ್ಷಿಸುತ್ತದೆ ಇನ್ನು ಹೃದಯದ ಆರೋಗ್ಯವನ್ನು ಸುಧಾರಿಸುವಲ್ಲಿ ಹೆಸರು ಬೇಳೆಯ ಭಾವದ ಕುರಿತು ನಡೆಸಿದ ಅಧ್ಯಯನಗಳು ದ್ವಿದಳ ಧಾನ್ಯಗಳ ನಿಯಮಿತ ಮತ್ತು ನಿಯಂತ್ರಿತ ಸೇವನೆಯು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.

Related Post

Leave a Comment