ಈ ರೀತಿಯ ಹಾಲನ್ನು ನೀವು ಕುಡಿದರೆ ಈ ಬೇಸಿಗೆಯಲ್ಲಿ ತಂಪನ್ನು ಕೊಡುವುದರ ಜೊತೆಗೆ ಒಳ್ಳೆಯ ಎನರ್ಜಿಯನ್ನು ಕೊಡುತ್ತದೆ. ದೇಹಕ್ಕೆ ಉಂಟಾದ ಆಯಾಸ, ನಿಶಕ್ತಿ ಎಲ್ಲಾ ಕೂಡ ಕಡಿಮೆಯಾಗುತ್ತದೆ. ಮಂಡಿ ನೋವು ಸೊಂಟ ನೋವು ಕೀಲು ನೋವು, ಮಸಾಲ್ ಪೇನ್ ಅನ್ನು ಕೂಡ ಕಡಿಮೆ ಮಾಡುತ್ತದೆ.ಗೊಂದ್ ಖಾದಿರ ತಪ್ಪಿನ ಗುಣವನ್ನು ಹೊಂದಿದೆ.ಇದನ್ನು ನೀರಿನಲ್ಲಿ ನೆನಸಿದರೆ ಐಸ್ ರೀತಿ ಆಗುತ್ತದೆ.ಇದು ದೇಹವನ್ನು ತಂಪಾಗಿ ಇಡುತ್ತದೆ.ಜೊತೆಗೆ ಒಳ್ಳೆಯ ಎನರ್ಜಿ ಅನ್ನು ಕೊಡುತ್ತದೆ.ಇದರಲ್ಲಿ ಫೈಬರ್ ಪ್ರೊಟೀನ್ ಝೀಕ್ ಅಂಶ ಕೂಡ ಇದೆ.ಇದು ಚರ್ಮಕ್ಕೆ ಮತ್ತು ಜೀರ್ಣ ಕ್ರಿಯೆಗೂ ಕೂಡ ಒಳ್ಳೆಯದು.
ಒಂದು ವೇಳೆ ದೇಹದಲ್ಲಿ ಉಷ್ಣಾಂಶ ಜಾಸ್ತಿಯಾಗಿ ಹೊಟ್ಟೆ ಉರಿ ಬರುತ್ತಿದ್ದಾರೆ ಮತ್ತು ಬಾಯಲ್ಲಿ ಗುಳ್ಳೆ ಕಣ್ಣು ಕೆಂಪಾಗಿದ್ದಾರೆ ಈ ಗೊಂದು ಬೇಗಾ ಕಡಿಮೇ ಮಾಡುತ್ತದೆ.ಇನ್ನು 1 ಚಮಚ ಗೊಂದ್ ಖಾದಿರ ಮತ್ತು 15 ಬಾದಾಮಿಯನ್ನು ನೀರಿನಲ್ಲಿ ನೆನಸಿಡಬೇಕು ಮತ್ತು 2 ಚಮಚ ಸೋಂಪ ಕಾಳನ್ನು ನೀರಿನಲ್ಲಿ ನೆನಸಿಡಬೇಕು. ಮಾರನೇ ದಿನ ಇದೆಲ್ಲವನ್ನು ಪೇಸ್ಟ್ ಮಾಡಿಕೊಳ್ಳಬೇಕು.
ನಂತರ ಒಂದು ಪಾತ್ರೆಗೆ ಒಂದು ಗ್ಲಾಸ್ ಹಾಲನ್ನು ಹಾಕಿ ಕುದಿಸಿ ಮತ್ತು ತಯಾರಿಸಿದ ಪೇಸ್ಟ್ ಅನ್ನು ಹಾಕಿ ಚೆನ್ನಾಗಿ ಕುದಿಸಬೇಕು.ಇದಕ್ಕೆ ನೆನಸಿದ ಗೊಂದ್ ಖಾದಿರವನ್ನು 2 ಚಮಚ ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು.ಈ ಬೇಸಿಗೆಯಲ್ಲಿ ಈ ಹಾಲು ತುಂಬಾ ಒಳ್ಳೆಯದು.ಇದಕ್ಕೆ ನೀವು ಕಲ್ಲು ಸಕ್ಕರೆ ಹಾಕಿಕೊಂಡು ಕುಡಿಯಬಹುದು.ಇದನ್ನು ಸೇವನೆ ಮಾಡುವುದರಿಂದ ನಿಮ್ಮ ದೇಹಕ್ಕೆ ಶಕ್ತಿ ಸಿಗುತ್ತದೆ.