30 ರಿಂದ 50 ವಯಸ್ಸಿನ ಜನರ ಚರ್ಮದ ಸುಕ್ಕುಗಳಿಗೆ ಸುಲಭ ಮತ್ತು ಪರಿಣಾಮಕಾರಿ ಮನೆಮದ್ದುಗಳು!

Written by Anand raj

Published on:

ಚರ್ಮವು ನಮ್ಮ ದೇಹದಲ್ಲಿ ಅತ್ಯಂತ ಸೂಕ್ಷ್ಮವಾದ ಅಂಗವಾಗಿದೆ. ಉತ್ತಮ ಚರ್ಮವನ್ನು ಪಡೆಯುವುದಕ್ಕೋಸ್ಕರ ಹಲವು ಜನರು ಹಲವಾರು ರೀತಿಯ ಪ್ರಯತ್ನಗಳನ್ನು ಮಾಡುತ್ತಿರುವುದನ್ನು ನಾವು ದಿನನಿತ್ಯದಲ್ಲಿ ಸಾಮಾನ್ಯವಾಗಿ ನೋಡುತ್ತೇವೆ. ಆದರೆ ಕೆಲವೊಮ್ಮೆ ಎಲ್ಲರೂ ಸಹ ಉತ್ತಮವಾದ ಚರ್ಮವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಹಾಳಾದ ಚರ್ಮದ ಆರೈಕೆಯು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತದೆ.ಅದರಲ್ಲೂ ನಮ್ಮ ವ್ಯಕ್ತಿತ್ವವನ್ನು ಎದ್ದುಕಾಣುವಂತೆ ಮಾಡುವುದು ನಮ್ಮ ಮುಖ.

ಸಾಮಾನ್ಯವಾಗಿ ಮುಖದಲ್ಲಿ ಉಂಟಾಗುವ ಮೊಡವೆಗಳು ಕಪ್ಪು ಕಲೆಯನ್ನು ಮಾತ್ರ ಉಂಟುಮಾಡುವುದಿಲ್ಲ. ಇದರ ಜೊತೆಗೆ ಚರ್ಮದ ಸಣ್ಣ ರಂಧ್ರಗಳನ್ನು ಸಹ ತೆಗೆದುಹಾಕುತ್ತದೆ. ಇದು ಚರ್ಮದ ಅಂಗಾಂಶದ ನಾಶದಿಂದಾಗಿ ರೂಪುಗೊಳ್ಳುತ್ತದೆ.ಚರ್ಮದ ಮೇಲೆ ಸಣ್ಣ ರಂದ್ರಗಳು ಉಂಟಾದರೆ ಇದು ಅಕಾಲಿಕ ವಯಸ್ಸಾದ ನೋಟವನ್ನು ನೀಡಬಹುದು. ಈ ರೀತಿಯ ಗುರುತುಗಳ ಪರಿಣಾಮವಾಗಿ ಚರ್ಮವು ಅಸಮವಾಗುತ್ತದೆ. ಇದರಿಂದ ಚರ್ಮವು ನಯವಾದ ವಿನ್ಯಾಸವನ್ನು ಕಳೆದುಕೊಳ್ಳುತ್ತದೆ.

ಈ ರೀತಿ ಹಾಳಾದ ಚರ್ಮವನ್ನು ಲೇಸರ್ ಥೆರಪಿ, ಮೈಕ್ರೋ ಡರ್ಮೋ ಬ್ರೇಶನ್, ಆಲ್ಫಾ ಹೈಡ್ರಾಕ್ಸಿ ಆಸಿಡ್ಸ್ ಗಳು ಮುಂತಾದ ವೈದ್ಯಕೀಯ ಆಧಾರಿತ ಚಿಕಿತ್ಸೆಗಳಿವೆ.ಸಸ್ಯದ ಸಾರದಿಂದ ರೂಪಗೊಂಡ ಕೆಲವು ಧಾನ್ಯ ಪದಾರ್ಥಗಳೊಂದಿಗೆ ಚರ್ಮವನ್ನು ನಿಧಾನವಾಗಿ ಉಜ್ಜುವುದು ಸಹ ಇದಕ್ಕೆ ಒಂದು ಪರಿಹಾರವಾಗಿದೆ. ಆದರೆ ವ್ಯಾಪಕವಾದ ಚರ್ಮದ ಗುರುತುಗಳಿಗೆ, ಹಲವಾರು ಚಿಕಿತ್ಸೆಗಳ ಅಗತ್ಯವಿರುತ್ತದೆ. ಇದರ ಜೊತೆಗೆ ಆಳವಾದ ಮೊಡವೆಗಳು ನಿಮ್ಮ ಮುಖದಲ್ಲಿ ಕಲೆಯನ್ನು ಉಂಟುಮಾಡುತ್ತವೆ.

ಇಂತಹ ಸಮಯದಲ್ಲಿ ಕೆಲವು ಮನೆಮದ್ದುಗಳು ಸಹ ನಿಮಗೆ ಸಹಾಯ ಮಾಡಬಹುದು.ಆದರೆ ನಿಮ್ಮ ಮೊಡವೆಯ ಸ್ಥಿತಿ ಯಾವ ಹಂತದಲ್ಲಿದೆ ಎನ್ನುವುದು ಮುಖ್ಯವಾಗಿದೆ. ಆದರೆ ಮೊಡವೆ ಸ್ಥಿತಿ ಕಡಿಮೆಯಾದ ನಂತರ ಅಥವಾ ಗಾಯವನ್ನು ಗುಣಪಡಿಸಿದ ನಂತರ ಗಾಯದ ನಿವಾರಣೆಗೆ ಮನೆಮದ್ದು ಗಳನ್ನು ಕೈಗೊಳ್ಳಬೇಕು. ಯಾವುದೇ ರೀತಿಯ ಮೊಡವೆಗಳು, ದದ್ದುಗಳಿಲ್ಲದೆ ಇರುವಂತಹ ಚರ್ಮಕ್ಕೆ ಉತ್ತಮವಾದ ಸ್ಕ್ರಬ್ ಅನ್ನು ಬಳಸಿ.

​ಮನೆಯಲ್ಲಿ ತಯಾರಿಸಿದ ಮುಖದ ಸ್ಕ್ರಬ್ ಬಳಸಿ:-ಮೊಸರು ಮತ್ತು ಒಂದು ಚಿಟಿಕೆ ಅರಿಶಿನದೊಂದಿಗೆ ಸ್ವಲ್ಪ ಪ್ರಮಾಣದ ಅಕ್ಕಿಹಿಟ್ಟನ್ನು ಮಿಶ್ರಣಮಾಡಿ.ಇದನ್ನು ನಿಮ್ಮ ಮುಖಕ್ಕೆ ಸಂಪೂರ್ಣವಾಗಿ ಹಚ್ಚಿ ಮತ್ತು ವೃತ್ತಾಕಾರದ ಚಲನೆಯೊಂದಿಗೆ ಚರ್ಮದ ಮೇಲೆ ನಿಧಾನವಾಗಿ ಮಸಾಜ್ ಮಾಡಿ. ವಿಶೇಷವಾಗಿ ಮೊಡವೆ ಗುರುತು ಇರುವ ಜಾಗದಲ್ಲಿ ಚೆನ್ನಾಗಿ ಮಸಾಜ್ ಮಾಡಿ. ತದನಂತರದಲ್ಲಿ ತಣ್ಣೀರಿನ ಸಹಾಯದಿಂದ ನಿಮ್ಮ ಮುಖವನ್ನು ತೊಳೆಯಿರಿ.ಈ ರೀತಿಯ ಸಮಸ್ಯೆಗಳಿಗೆ ಯಾವಾಗಲೂ ನೈಸರ್ಗಿಕ ಪದಾರ್ಥಗಳನ್ನು ಬಳಸಿ.ಏಕೆಂದರೆ ನೈಸರ್ಗಿಕ ಪದಾರ್ಥಗಳು ನಿಮ್ಮ ಚರ್ಮದ ಮೇಲೆ ಯಾವುದೇ ರೀತಿಯ ಅಡ್ಡ ಪರಿಣಾಮಗಳನ್ನು ಉಂಟು ಮಾಡುವುದಿಲ್ಲ.

​ನಿಮ್ಮ ಮುಖದ ಅಂದವನ್ನು ಹೆಚ್ಚಿಸುವ ಫೇಸ್ ಪ್ಯಾಕ್ ಗಳು:–ಮೊಟ್ಟೆಯ ಬಿಳಿ ಭಾಗದೊಂದಿಗೆ 3 ಚಮಚ ಓಟ್ಸ್ ಮತ್ತು ತಲಾ ಒಂದು ಚಮಚ ಮೊಸರು ಮತ್ತು ಜೇನುತುಪ್ಪವನ್ನು ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಮುಖದ ಮೇಲೆ ಹಚ್ಚಿ, ತುಟಿಗಳು ಮತ್ತು ಕಣ್ಣುಗಳ ಸುತ್ತಲಿನ ಪ್ರದೇಶವನ್ನು ತಪ್ಪಿಸಿ. ಅರ್ಧ ಗಂಟೆಗಳ ನಂತರ ನಿಮ್ಮ ಮುಖವನ್ನು ತೊಳೆಯಿರಿ.ಉತ್ತಮ ಚರ್ಮವನ್ನು ಪಡೆಯುವುದಕ್ಕೋಸ್ಕರ ನೀವು ಒಣಗಿದ ಮತ್ತು ಪುಡಿಮಾಡಿದ ನಿಂಬೆ, ಕಿತ್ತಳೆ ಸಿಪ್ಪೆ ಬಳಸಬಹುದು.ಎರಡು ಪದಾರ್ಥಗಳು ನಿಮಗೆ ಉತ್ತಮ ಚರ್ಮವನ್ನು ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲ.

ಕೆಲವೊಮ್ಮೆ ಇಂತಹ ಫೇಸ್ ಪ್ಯಾಕ್ ಗಳು ಚರ್ಮದ ಶುಷ್ಕತೆಯನ್ನು ಉಂಟುಮಾಡಬಹುದು. ಒಣ ಚರ್ಮಕ್ಕಾಗಿ, ಎರಡು ಚಮಚದಷ್ಟು ಮೊಸರನ್ನು ತೆಗೆದುಕೊಂಡು, ಅದಕ್ಕೆ ಒಂದು ಚಿಟಿಕೆ ಅರಿಶಿನವನ್ನು ಸೇರಿಸಿ, ನಿಮ್ಮ ಮುಖದ ಭಾಗಕ್ಕೆ ಸಂಪೂರ್ಣವಾಗಿ ಹಚ್ಚಿರಿ. 15 ನಿಮಿಷಗಳ ನಂತರ ನಿಮ್ಮ ಮುಖವನ್ನು ತಣ್ಣೀರಿನ ಸಹಾಯದಿಂದ ತೊಳೆಯಿರಿ. ಇದು ನಿಮ್ಮ ಚರ್ಮವನ್ನು ಮೃದುಗೊಳಿಸುತ್ತದೆ ಮತ್ತು ಯಾವುದೇ ರೀತಿಯ ಕಲೆಗಳು ಇದ್ದರೂ ಅದನ್ನು ಹಗುರಗೊಳಿಸುತ್ತದೆ.

​ಮುಖದ ಕಲೆಗಳನ್ನು ನಿವಾರಿಸಲು ನಿಂಬೆ ಬಳಸಿ:-ನಿಂಬೆಯ ರಸವು ನಿಮ್ಮ ಮುಖದಲ್ಲಿರುವ ಕಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ನಿಂಬೆರಸದೊಂದಿಗೆ ಕೆಲವು ಹನಿ ಜೇನು ತುಪ್ಪವನ್ನು ಮಿಶ್ರಣ ಮಾಡಿ ಮತ್ತು ಇದನ್ನು ನಿಮ್ಮ ಕಲೆಗಳಿರುವ ಜಾಗಕ್ಕೆ ಹಚ್ಚಿ. ಈ ಮಿಶ್ರಣವನ್ನು ಹತ್ತಿ ಅಥವಾ ಬ್ರಷ್ ಸಹಾಯದಿಂದ ನಿಮ್ಮ ಮುಖಕ್ಕೆ ಅನ್ವಯಿಸಬಹುದು. ಈ ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಚ್ಚಿದ ನಂತರ 10 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ನಂತರ ತಣ್ಣೀರಿನ ಸಹಾಯದಿಂದ ತೊಳೆಯಿರಿ. ನಿಂಬೆರಸವನ್ನು ಅನ್ವಯಿಸಿದ ನಂತರ ಸೂರ್ಯನ ಬೆಳಕನ್ನು ನೀವು ತಪ್ಪಿಸಬೇಕು. ನೀವು ಬಯಸಿದರೆ, ನಿಂಬೆರಸದೊಂದಿಗೆ ಒಂದು ಚಮಚ ಅಲೋವೆರ ಜೆಲ್ ನ ಮಿಶ್ರಣವನ್ನು ಬಳಸಬಹುದು.

ಅಲೋವೆರಾ ಎಲ್ಲಾ ಚರ್ಮದ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ. ವಾಸ್ತವವಾಗಿ ಅಲೊವೆರ ಜಲ್ ಅನ್ನು ಮೊಡವೆ ಕಲೆಗಳ ಮೇಲೆ ಹಚ್ಚಬಹುದು.ನೀವು ನೇರವಾಗಿ ಅಲೋವೆರಾ ಸಸ್ಯದಿಂದ ಅಲೋವೆರ ಜೆಲ್ ತೆಗೆದುಕೊಂಡು ಬಳಸಬಹುದು. ಒಂದು ವೇಳೆ ಇದು ನಿಮಗೆ ಲಭ್ಯವಾಗದೇ ಇದ್ದರೆ, ಮಾರುಕಟ್ಟೆಯಲ್ಲಿ ಹಲವಾರು ವಿಧದ ಅಲೋವೆರ ಜೆಲ್ ದೊರೆಯುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ,ಅಲೋವೆರಾ ಎಲ್ಲಾ ರೀತಿಯ ಚರ್ಮದ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.

​ಹಣ್ಣಿನ ಫೇಸ್ ಪ್ಯಾಕ್:-ಯಾವುದೇ ರೀತಿಯ ಚರ್ಮದ ಸಮಸ್ಯೆ ಇದ್ದರೂ ಅದಕ್ಕೆ ಪಪ್ಪಾಯಿ ಉತ್ತಮ ಪರಿಹಾರ ನೀಡುತ್ತದೆ. ಚೆನ್ನಾಗಿ ಮಾಗಿದ ಪಪ್ಪಾಯಿ ತಿರುಳನ್ನು, ತುರಿದ ಸೌತೆಕಾಯಿ , ಟಮೋಟೋ ತಿರುಳು ಮತ್ತು ಕಿತ್ತಳೆ ಹಣ್ಣಿನ ರಸದೊಂದಿಗೆ ಮಿಶ್ರಣ ಮಾಡಿ. ಇದನ್ನು ಪ್ರತಿದಿನ ನಿಮ್ಮ ಮುಖಕ್ಕೆ ಹಚ್ಚಿ. ಅನಂತರದಲ್ಲಿ ಅರ್ಧ ಗಂಟೆಯ ನಂತರ ತೊಳೆಯಿರಿ.

​ಉತ್ತಮ ಚರ್ಮಕ್ಕೆ ಜೇನುತುಪ್ಪ:-ಜೇನುತುಪ್ಪವನ್ನು ನಿಮ್ಮ ಮುಖಕ್ಕೆ ಲೇಪನ ಮಾಡಿ.ಈ ರೀತಿ ಜೇನುತುಪ್ಪವನ್ನು ನಿಮ್ಮ ಮುಖಕ್ಕೆ ಲೇಪನ ಮಾಡುವುದರಿಂದ ಇದು ನಿಮ್ಮ ಚರ್ಮವನ್ನು ಮೃದುವಾಗಿಸುತ್ತದೆ.ಯಾವುದೇ ರೀತಿಯ ಚರ್ಮ ಸಂಬಂಧಿ ಸಮಸ್ಯೆ ಇದ್ದರೂ ಅದಕ್ಕೆ ಯಾವಾಗಲೂ ನೈಸರ್ಗಿಕ ಮಾರ್ಗಗಳ ಮೂಲಕ ಪರಿಹಾರ ಕಂಡುಕೊಳ್ಳುವುದು ಉತ್ತಮ. ಏಕೆಂದರೆ ನೈಸರ್ಗಿಕ ಪದಾರ್ಥಗಳು ಯಾವುದೇ ರೀತಿಯ ಅಡ್ಡ ಪರಿಣಾಮಗಳನ್ನು ಉಂಟು ಮಾಡುವುದಿಲ್ಲ. ಇದರ ಜೊತೆಗೆ ಕೆಲವರು ಚರ್ಮ ಸಂಬಂಧಿ ಸಮಸ್ಯೆಗೆ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡುತ್ತಾರೆ. ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿದರೂ ಕೆಲವೊಮ್ಮೆ ಅವರ ಸಮಸ್ಯೆಗಳಿಗೆ ಪರಿಹಾರ ದೊರೆಯುವುದಿಲ್ಲ.

ನೈಸರ್ಗಿಕ ವಸ್ತುಗಳಿಂದ ಪರಿಹಾರ ಪಡೆದುಕೊಳ್ಳುವುದು ತುಂಬಾ ಹೆಚ್ಚಿನ ಸಮಯವನ್ನು ಪಡೆದುಕೊಳ್ಳುತ್ತದೆ. ಆದರೆ ಕೆಲವರು ಸ್ವಲ್ಪ ದಿನಗಳ ಕಾಲ ಬಳಸಿ ಇದರಿಂದ ಯಾವುದೇ ಪ್ರಯೋಜನವಿಲ್ಲ ಎಂಬ ಕಾರಣಕ್ಕೆ ಅದನ್ನು ನಿಲ್ಲಿಸಿ ಬಿಡುತ್ತಾರೆ.ಆದರೆ ನೈಸರ್ಗಿಕ ಪದಾರ್ಥಗಳಿಂದ ಪರಿಹಾರ ಪಡೆಯಬೇಕೆಂದರೆ ನೀವು ಮೂರು ತಿಂಗಳಾದರೂ ಅದನ್ನು ನಿರಂತರವಾಗಿ ಬಳಸಬೇಕು.

Related Post

Leave a Comment