ಸಕ್ಕರೆ ಕಾಯಿಲೆಗೆ ಪವರ್ಫುಲ್ ಅದ ಹಣ್ಣುಗಳಿವು ಮಿಸ್ ಮಾಡಬೇಡಿ!

Written by Anand raj

Published on:

ಮಧುಮೇಹಿಗಳಿಗೆ ತಮ್ಮ ಆಹಾರ ಕ್ರಮದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಪಾಲಿಸಿಕೊಂಡು ಹೋಗಬೇಕಾಗುತ್ತದೆ. ಅದರಲ್ಲೂ ಮುಖ್ಯವಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ತುಂಬಾ ಶ್ರಮ ವಹಿಸಬೇಕಾಗುವುದು. ಸಕ್ಕರೆಯು ಇದಕ್ಕೆ ಪ್ರಮುಖ ಕಾರಣ ಎಂದು ಕೆಲವರು ಭಾವಿಸಿರುವರು.

ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವುದು ಎಂದು ಹೇಳಲಾಗುತ್ತದೆ. ಆದರೆ ಕೆಲವೊಂದು ಆಹಾರಗಳು ಕೂಡ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವುದು. ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವಂತಹ ಜನರು ತಮ್ಮ ಆಹಾರ ಕ್ರಮದಲ್ಲಿ ಹೆಚ್ಚಿನ ತರಕಾರಿ ಹಾಗೂ ಹಣ್ಣುಗಳನ್ನು ಸೇರಿಸಿಕೊಂಡರೆ ತುಂಬಾ ಒಳ್ಳೆಯದು. ಆದರೆ ಯಾವ ಹಣ್ಣುಗಳು ರಕ್ತದಲ್ಲಿನ ಸಕ್ಕರೆ ಮಟ್ಟ ಕಾಪಾಡಲು ಒಳ್ಳೆಯದು ಎಂದು ನೀವು ತಿಳಿಯಬೇಕಾಗಿದೆ. ಅಂತಹ ಕೆಲವು ಹಣ್ಣುಗಳ ಬಗ್ಗೆ ನಾವು ನಿಮಗೆ ತಿಳಿಸಿಕೊಡಲಿದ್ದೇವೆ.

ಪ್ರಕೃತಿದತ್ತವಾದ ಎಲ್ಲಾ ಹಣ್ಣುಗಳು ಪೋಷಕಾಂಶಗಳಿಂದ ಕೂಡಿದೆ. ಆದರೆ ಮಧುಮೇಹಿಗಳು ಮಾತ್ರ ಸ್ವಲ್ಪ ಎಚ್ಚರಿಕೆ ವಹಿಸಬೇಕು. ಮಾವು, ಕಸ್ತೂರಿ ಹಣ್ಣು ತುಂಬಾ ಆರೋಗ್ಯಕಾರಿ. ಆದರೆ ಇದರಲ್ಲಿ ಅಧಿಕ ಸಕ್ಕರೆ ಅಂಶವು ಇದೆ.

ಆದರೆ ಈ ಸಕ್ಕರೆಯು ಕೃತಕ ಪಾನೀಯ ಹಾಗೂ ಸಿಹಿಯಲ್ಲಿ ಕಂಡುಬರುವ ಸಕ್ಕರೆಯಂತೆ ಹಾನಿಕಾರಕವಲ್ಲ. ಇದನ್ನು ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳುವ ಮೊದಲು ವೈದ್ಯರ ಸಲಹೆ ಪಡೆಯಿರಿ.

ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇರುವಂತಹ ಹಣ್ಣುಗಳನ್ನು ಆಯ್ಕೆ ಮಾಡಬೇಕು. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಂಡು ಹೋಗಲು ಸಾಧ್ಯವಾಗಲಿದೆ. ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇರುವಂತಹ ಆಹಾರವು ನಿಧಾನವಾಗಿ ಜೀರ್ಣ ಹಾಗೂ ಚಯಾಪಚಯ ವಾಗುವುದು.

ಇದರಿಂದ ಸಕ್ಕರೆ ಮಟ್ಟವು ತುಂಬಾ ನಿಧಾನವಾಗಿ ಏರಿಕೆ ಆಗುವುದು. ಈ ಕೆಲವು ಹಣ್ಣುಗಳನ್ನು ನೀವು ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ ಆಗ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿ ಇರುವುದು.

ಸೇಬು

ಸೇಬಿನಲ್ಲಿ ವಿಟಮಿನ್ ಸಿ ಹಾಗೂ ನಾರಿನಾಂಶವು ಅತ್ಯಧಿಕ ಮಟ್ಟದಲ್ಲಿದ್ದು, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡಲು ತುಂಬಾ ಸಹಕಾರಿ.

ಕ್ಯಾಲರಿ ಕಡಿಮೆ ಇರುವಂತಹ ಸೇಬಿನಲ್ಲಿ ಆಂಟಿಆಕ್ಸಿಡೆಂಟ್ ಕೂಡ ಇದ್ದು ದೀರ್ಘಕಾಲಿಕ ಮಧುಮೇಹವು ಕಾಡುವುದು. ಹೀಗಾಗಿ ನೀವು ಉಪಾಹಾರ ತ್ಯಜಿಸುವ ಆಲೋಚನೆ ಮಾಡಿದ್ದರೆ, ಆಗ ಒಂದು ಸೇಬು ತಿನ್ನಿ.

ಕಿತ್ತಳೆ

ಕಿತ್ತಳೆ ಹಾಗೂ ಮೂಸಂಬಿಯು ಮಧುಮೇಹಿಗಳಿಗೆ ತುಂಬಾ ಒಳ್ಳೆಯ ಹಣ್ಣುಗಳು ಎಂದು ಹೇಳಲಾಗಿದೆ. ಸಿಟ್ರಸ್ ಜಾತಿಗೆ ಸೇರಿರುವ ಈ ಹಣ್ಣುಗಳು ಮಧುಮೇಹಿಗಳಿಗೆ ಲಾಭಕಾರಿ.

ಮಧ್ಯಮ ಗಾತ್ರದ ಒಂದು ಕಿತ್ತಳೆಯಲ್ಲಿ ಶೇ.75ರಷ್ಟು ವಿಟಮಿನ್ ಸಿ ಇದ್ದು, ಇದು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಕಾರಿ. ಇದರಲ್ಲಿ ಫಾಲಟೆ ಮತ್ತು ಪೊಟಾಶಿಯಂ ಕೂಡ ಅತ್ಯಧಿಕವಾಗಿದೆ.

ಪೀಚ್

ರಸಭರಿತವಾಗಿರುವಂತಹ ಈ ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು, ರಕ್ತದಲ್ಲಿನ ಸಕ್ಕರೆ ಮಟ್ಟ ಕಾಪಾಡಲು ಸಹಕಾರಿ.

ದೇಹದಲ್ಲಿ ಪೊಟಾಶಿಯಂ ಮಟ್ಟವು ಕಡಿಮೆ ಆದರೆ ಅದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗುವುದು ಹಾಗೂ ಟೈಪ್ 2 ಮಧುಮೇಹವು ಕಾಡುವ ಸಾಧ್ಯತೆಯು ಇರುವುದು. ಹೀಗಾಗಿ ಪೊಟಾಶಿಯಂ ಅಧಿಕವಾಗಿ ಇರುವಂತಹ ಆಹಾರವನ್ನು ಸೇವನೆ ಮಾಡಿದರೆ ಮಧುಮೇಹಿಗಳಿಗೆ ಒಳ್ಳೆಯದು.

ಏಪ್ರಿಕಾಟ್

ಇದರಲ್ಲಿ ಹಲವಾರು ಬಗೆಯ ಪೋಷಕಾಂಶಗಳು ಹಾಗೂ ಆರೋಗ್ಯ ಗುಣಗಳು ಇವೆ. ಇದೊಂದು ವೈವಿಧ್ಯಮಯ ಹಣ್ಣಾಗಿದೆ. ಮಧುಮೇಹಿಗಳು ತಮ್ಮ ಆಹಾರ ಕ್ರಮದಲ್ಲಿ ಏಪ್ರಿಕಾಟ್ ನ್ನು ಸೇರಿಸಿಕೊಂಡರೆ ಅದು ತುಂಬಾ ಲಾಭಕಾರಿ ಎಂದು ಹೇಳಲಾಗಿದೆ.

ಪೀಯರ್ಸ್
ವಿಟಮಿನ್ ಗಳಿಂದ ಸಮೃದ್ಧವಾಗಿರುವ ಈ ಹಣ್ಣನ್ನು ಮಧುಮೇಹಿಗಳು ತಪ್ಪದೆ ತಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬೇಕು. ಇದರಲ್ಲಿ ನಾರಿನಾಂಶವು ಅಧಿಕವಾಗಿದ್ದು, ಸಕ್ಕರೆ ಹೀರುವಿಕೆ ನಿಧಾನವಾಗಿಸುವುದು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟ ಸುಧಾರಿಸುವುದು. ಇದನ್ನು ಶೇಖರಿಸಿಕೊಂಡು ಇಟ್ಟರೂ ಅದರ ರುಚಿ ಹಾಗೂ ಗಾತ್ರವು ಹಾಗೆ ಇರುವುದು.

ಕಿವಿ ಹಣ್ಣು

ವಿದೇಶಿ ಹಣ್ಣಾಗಿರುವಂತಹ ಕಿವಿಯು ನೋಡಲು ಹಾಗೂ ರುಚಿಯಲ್ಲಿ ಅದ್ಭುತವಾಗಿರುವುದು. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಲು ಸಹಕಾರಿಯೇ ಎನ್ನುವ ಪ್ರಶ್ನೆಯು ಹಲವಾರು ಇರುವುದು.

ಪ್ರತಿರೋಧಕ ಶಕ್ತಿ ವೃದ್ಧಿಸುವಂತಹ ಗುಣ ಹೊಂದಿರುವ ಕಿವಿ ಹಣ್ಣು ಆರೋಗ್ಯಕ್ಕೆ ಅದ್ಭುತವಾಗಿ ಕೆಲಸ ಮಾಡುವುದು. ಈ ಹಣ್ಣಿನಲ್ಲಿನ ವಿಟಮಿನ್ ಸಿ, ಪೊಟಾಶೀಯಂ ಮತ್ತು ಕಾರ್ಬೋಹೈಡ್ರೇಟ್ಸ್ ಇದೆ. ಇದು ಮಧುಮೇಹಿ ಸ್ನೇಹಿ ಹಣ್ಣಾಗಿದೆ.

ಮಧುಮೇಹಿಗಳು ಈ ಎಲ್ಲಾ ಹಣ್ಣುಗಳನ್ನು ತಮ್ಮ ಆಹಾರ ಕ್ರಮದಲ್ಲಿ ಮಿತವಾಗಿ ಸೇವಿಸುವ ಮೂಲಕ ಸೇರಿಸಿಕೊಳ್ಳಬಹುದು.

ಅತಿಯಾದರೆ ಎಲ್ಲವೂ ಹಾನಿ ಉಂಟು ಮಾಡುವುದು ಎನ್ನುವುದು ನಮಗೆಲ್ಲರಿಗೂ ತಿಳಿದೇ ಇದೆ. ಒಳ್ಳೆಯ ವಸ್ತುವು ಹಾನಿ ಉಂಟು ಮಾಡಬಹುದು. ಮಧುಮೇಹಿಗಳು ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆದು ಬಳಿಕ ಇವುಗಳ ಸೇವನೆ ಮಾಡಿ.

Related Post

Leave a Comment