ಬೆಳಗ್ಗೆ ಎದ್ದ ತಕ್ಷಣ ಕುಡಿದರೆ ಜೀವನ ಪರ್ಯಾತ ಕಿಲುಗಳಲ್ಲಿ ನೋವು ಕಾಣುವುದಿಲ್ಲ, ಮೂಳೆಗಳು ವೀಕ್ ಆಗುವುದಿಲ್ಲ ಶರೀರದಲ್ಲಿ ವಾತ ಹೆಚ್ಚಾಗುವುದಿಲ್ಲ, ಶರೀರದಲ್ಲಿ ಕ್ಯಾಲ್ಸಿಯಂ ಕೊರತೆ ಉಂಟಾಗುವುದಿಲ್ಲ,ಸೊಂಟನೋವು ಉಂಟಾಗುವುದಿಲ್ಲ. ಈ ಮನೆಮದ್ದು ಮಾಡುವುದು ತುಂಬಾನೇ ಸುಲಭ.
ಇದಕ್ಕೆ ಮುಖ್ಯವಾಗಿ ಬೇಕಾಗಿರೋದು ಸೋಂಪು ಕಾಳು. ಇದು ಮೆಟಬಲಿಜಾಮ್ ಅನ್ನು ಹೆಚ್ಚು ಮಾಡುತ್ತದೆ.ಸೋಂಪು ಕಾಳಿನ ಸೇವನೆಯಿಂದ ಮೂಳೆಗಳಲ್ಲಿ ಕಂಡು ಬರುವ ವಾತದ ಸಮಸ್ಸೆಯು ದೂರವಾಗುತ್ತದೆ. ಇನ್ನು ಇದಕ್ಕೆ ಜೀರಿಗೆ ಕಾಳು ಕೂಡ ಬೇಕಾಗುತ್ತದೆ.ಜೀರಿಗೆ ಕೂಡ ಜೀರ್ಣಕ್ರಿಯೆಗೆ ತುಂಬಾನೆ ಒಳ್ಳೆಯದು.ಕಬ್ಬಿಣಂಶ ಹೆಚ್ಚಾಗಿ ಇರುವುದರಿಂದ ಇದು ರಕ್ತವನ್ನು ಹೆಚ್ಚಿಸುತ್ತದೆ ಹಾಗು ನಿಶಕ್ತಿ ಸುಸ್ತು ಅನ್ನು ದೂರ ಮಾಡುತ್ತದೆ.ಮೂಳೆಗಳ ನೋವನ್ನು ದೂರ ಮಾಡುತ್ತದೆ. ಶುಗರ್ ಸಮಸ್ಸೆ ಅನ್ನು ದೂರ ಮಾಡುತ್ತದೆ.
ಇನ್ನು ಕೊನೆಯದಾಗಿ ಅಜ್ವಾನ ಅಥವಾ ಓಂ ಕಾಳು ಬೇಕಾಗುತ್ತದೆ. ಹೊಟ್ಟೆಗೆ ಸಂಬಂಧಿಸಿದ ಎಲ್ಲಾ ಸಮಸ್ಸೆಗೆ ಇದು ಬಹಳಾನೇ ಒಳ್ಳೆಯದು. ಈ ಮೂರು ವಸ್ತುಗಳು ಮನೆಮದ್ದು ತಯಾರಿಸುವುದಕ್ಕೆ ಬೇಕಾಗುತ್ತದೆ.
ಒಂದು ಬಂಡಾಲಿಗೆ ಒಂದು ಚಮಚ ಸೋಂಪು ಕಾಳು, ಒಂದು ಚಮಚ ಜೀರಿಗೆ, ಒಂದು ಚಮಚ ಓಂ ಕಾಳು ಹಾಕಿ ಫ್ರೈ ಮಾಡಬೇಕು. ನಂತರ ಪುಡಿ ಮಾಡಿ ಒಂದು ಡಬ್ಬದಲ್ಲಿ ಹಾಕಬೇಕು. ಬೆಳಗ್ಗೆ ಎದ್ದ ತಕ್ಷಣ ಉಗುರು ಬೆಚ್ಚನೆ ನೀರಿಗೆ ಈ ಪುಡಿಯನ್ನು ಅರ್ಧ ಚಮಚ ಹಾಕಿ ಮಿಕ್ಸ್ ಮಾಡಿ ಕುಡಿಯಬೇಕು ಹಾಗು ರಾತ್ರಿ ಸಮಯದಲ್ಲಿ ಇದೆ ರೀತಿ ಕುಡಿಯಬೇಕು. ದಿನದಲ್ಲಿ ಎರಡು ಬಾರಿ ಕುಡಿದರೆ ತುಂಬಾನೇ ಲಾಭ ನಿಮಗೆ ಸಿಗುತ್ತದೆ. ಇನ್ನು ಒಂದು ಲೋಟ ಹಾಲಿಗೆ ಹಾಕಿ ಕೂಡ ಸೇವನೆ ಮಾಡಬಹುದು. ಇದು ಮಲಬದ್ಧತೆ ಸಮಸ್ಸೆಯನ್ನು ನಿವಾರಣೆ ಮಾಡುತ್ತದೆ.ಈ ಮನೆಮದ್ದನ್ನು ಕುಡಿಯುವುದರಿಂದ ಮಲಬದ್ಧತೆ ದೂರವಾಗುತ್ತದೆ. ನೆನಪಿನ ಶಕ್ತಿ ಕಡಿಮೆ ಅದರೆ ಅಂತವರು ಇದನ್ನು ಕುಡಿಯುವುದು ತುಂಬಾ ಒಳ್ಳೆಯದು.