ಮಲಗುವ ಮುನ್ನ ಈ 2 ಶಬ್ದ ಹೇಳಿ 24 ಗಂಟೆಯಲ್ಲಿ ಕಷ್ಟ ಕಳೆಯುತ್ತೆ ಶ್ರೀ ಕೃಷ್ಣ ಹೇಳಿದ!

Written by Anand raj

Published on:

ಮಲಗುವ ಮುನ್ನ ಈ ಎರಡು ಶಬ್ದಗಳನ್ನು ಹೇಳಿ ಮಲಗಿ ನಿಮ್ಮ ಜೀವನದಲ್ಲಿ ಅದೆಂತ ಚಮತ್ಕಾರ ಬದಲಾವಣೆ ಆಗುತ್ತೆ ಅನ್ನೋದನ್ನ ನೀವೇ ನೋಡಿ ಮನೆಯಲ್ಲಿ ಹಿರಿಯರಿದ್ರೇನೇ ಚಂದ ಅವರ ಅನುಭವ ಮಾರ್ಗದರ್ಶನ ನಮಗೆ ದಾರಿ ದೀಪ ಆಗೋದ್ರಲ್ಲಿ ಎರಡ್ ಮಾತಿಲ್ಲ ಪ್ರತಿದಿನ ಅವರಿಂದ ಸಾಕಷ್ಟು ಅನುಭವ ಮಾತುಗಳು ಜೀವನಕ್ಕೆ ಉಪಯೋಗವಾಗಬಲ್ಲ ಹಿತ ನುಡಿಗಳು ಆಶೀರ್ವಾದವು ಯಾವುದು ಸಿಗೋದಿಲ್ಲ .

ಮನೆಯಲ್ಲಿ ಒಳ್ಳೆಯ ಸಂಸ್ಕಾರ ಬೆಳೆಸುವಂತಹ ಕೆಲಸ ಹಿರಿಯಯಿಂದಲ್ಲೆ ಆಗುತ್ತೆ ಮನೆಯ ಸದಸ್ಯರು ಪ್ರತಿ ದಿನ ದೇವರ ಪೂಜೆ ಮಾಡಬೇಕು ಸ್ತ್ರೀಯರನ್ನ ಗೌರವದಿಂದ ಕಾಣಬೇಕು ಕಿರಿಯರನ್ನು ಪ್ರೀತಿ ವಿಶ್ವಾಸದಿಂದ ಕಾಣಬೇಕು. ಹಿರಿಯರಿಗೆ ಗೌರವ ಆಧಾರಗಳನ್ನು ನೀಡಬೇಕು ಹೀಗೆ ಮಾಡುವ ಕೆಲಸಗಳಲ್ಲಿ ಧರ್ಮ ನಿಷ್ಠೆಯಿಂದ ನಡ್ಕೊಂಡ್ರೆ ಆ ಮನೆಯಲ್ಲಿ ಸದಾ ಸುಖ ಸಂತೋಷ ನೆಮ್ಮದಿ ಸಿಗುತ್ತೆ.

ಇದು ನಮ್ಮ ಸಂಪ್ರದಾಯ ಸಂಸ್ಕೃತಿ ಹೇಳಿಕೊಟ್ಟಿರುವಂತಹ ಪಾಠ ಆದರೆ ಕೆಲವೊಂದು ಮನೆಗಳಲ್ಲಿ ಹಿರಿಯರು ಸಂಪ್ರದಾಯ ಆಗಿ ಕೊಟ್ಟಂತಹ ಮಾರ್ಗದಲ್ಲಿ ನಡೆಯುವುದಕ್ಕೆ ಕಿರಿಯರು ಒಪ್ಪೋದಿಲ್ಲ . ಹಿರಿಯರ ಮಾತನ್ನು ಕಿವಿ ಮೇಲೆ ಹಾಕೊಳ್ಳೋದಿಲ್ಲ . ಯಾವ ಮನೆಯಲ್ಲಿ ಹಿರಿಯರ ಮಾತಿಗೆ ಬೆಲೆ ಕೊಡುವುದಿಲ್ಲ. ಯಾವ ಮನೆಯಲ್ಲಿ ಹಿರಿಯರು ಹಾಕಿಕೊಟ್ಟ ಸಂಸ್ಕಾರವನ್ನು ಗಾಳಿಗೆ ತೋರಲಾಗುತ್ತೋ. ಅಂತ ಮನೆಯಲ್ಲಿ ಸದಾ ಕಿರಿಕಿರಿ ಜಗಳ ಅನಾರೋಗ್ಯ ಹಣಕಾಸಿನ ಸಮಸ್ಯೆ ಹೀಗೆ ಹಲವಾರು ಸಮಸ್ಯೆಗಳು ಕಾಡ್ತಾನೆ ಇರುತ್ತವೆ.

ಜೀವನದಲ್ಲಿ ಕೆಲವೊಮ್ಮೆ ನಾವು ಅನ್ಕೊಂಡಂತೆ ಕೆಲಸ ಆಗುವುದಿಲ್ಲ ಮನೆಯಲ್ಲಿ ನೆಮ್ಮದಿ ಇರುವುದಿಲ್ಲ ಯಾವುದೇ ಕೆಲಸಕ್ಕೆ ಕೈ ಹಾಕಿದರೆ ಸೋಲು ಸೋಲು ಹೆಜ್ಜೆ ಹೆಜ್ಜೆಗೂ ಸೋಲು ಕಾಡ್ತಾನೆ ಇರುತ್ತೆ. ಮಾಡುವ ಕೆಲಸಗಳಲ್ಲಿ ನೆಮ್ಮದಿ ಇರುವುದಿಲ್ಲ ಹಾಗಾದ್ರೆ ಇದಕ್ಕೆ ಪರಿಹಾರ ಖಂಡಿತ ಇದೆ ವೀಕ್ಷಕರೆ…

ಶ್ರೀ ಕೃಷ್ಣ ಹೇಳಿದಂತೆ ಎರಡು ಶಬ್ದಗಳನ್ನು ಹೇಳಿ ಮಲಗಿದರೆ ಸಾಕು ನಿಮ್ಮ ಜೀವನದಲ್ಲಿ ಕಷ್ಟಗಳು ಪರಿಹಾರ ಆಗುತ್ತೆ. ಆ ಎರಡು ಶಬ್ದಗಳು ಯಾವುವು ಅಂದರೆ.ಶ್ರೀ ಕೃಷ್ಣನ ಪ್ರಕಾರ ಮನುಷ್ಯ ತನ್ನ ಜೀವನದಲ್ಲಿ ದುಃಖ ಮತ್ತು ದರಿದ್ರ ತನ ಮತ್ತು ಬಡತನ ಓಡಿಸುವುದಕ್ಕೆ ಪ್ರತಿದಿನ ಬೆಳಗ್ಗೆ ಈ ಏಳು ಕೆಲಸವನ್ನು ಮಾಡಬೇಕು ಹೇಳಿದ್ದಾರೆ.

ಯಾವ ವ್ಯಕ್ತಿ ಪ್ರತಿದಿನ ಈ ಏಳು ಕೆಲಸವನ್ನು ಮಾಡಿ ದಿನ ಆರಂಭ ಮಾಡ್ತಾರೋ ಅವನ ಜೀವನದಲ್ಲಿ ಕಷ್ಟಗಳು ವಿಜ್ಞಗಳು ತನ್ನಿಂದ ತಾನೇ ದೂರವಾಗುತ್ತದೆ. ಆ ವ್ಯಕ್ತಿ ಜೀವನದಲ್ಲಿ ಸಫಲತೆಯನ್ನು ಪಡೆಯುವುದನ್ನು ಯಾರಿಂದಲೂ ತಪ್ಪಿಸೋಕೆ ಸಾಧ್ಯವಿಲ್ಲ ಅಂತ ಹೇಳಿದ್ದಾರೆ.

ನಮ್ಮ ಸಂಪ್ರದಾಯದಲ್ಲಿ ಸೂರ್ಯೋದಯಕ್ಕಿಂತ ಮುಂಚೆ ಬ್ರಾಹ್ಮೀ ಮುಹೂರ್ತದಲ್ಲಿ ಹೇಳುವುದು ಅತಿ ಶ್ರೇಷ್ಠ ಅಂತ ಹೇಳಲಾಗಿದೆ ಆದರೆ ಇಂದಿನ ಯುಗದ ಯಾಂತ್ರಿಕ ಯುಗದ ಕೆಲಸ ಕಾರ್ಯಗಳಲ್ಲಿ ಬೇಗ ಹೇಳೋದು ಕಷ್ಟ ಅನ್ಸಿದ್ರೂ ಆದಷ್ಟು ಬೇಗ ಸೂರ್ಯೋದಯ ವೇಳೆ ಅಥವಾ ಅದಕ್ಕಿಂತ ಮುಂಚೆ ಹೇಳುವುದಕ್ಕೆ ಪ್ರಯತ್ನಿಸಬೇಕು. ಹಾಸಿಗೆ ಯಿಂದ ಎದ್ದ ಮೇಲೆ ನಿಮ್ಮ ಇಷ್ಟ ದೇವತೆಯನ್ನು ಸ್ಮರಿಸಿ ಈ ಶ್ಲೋಕವನ್ನು ಹೇಳಬೇಕು” ಓಂ ಕಾರಾಗ್ರೆ ವಸತಿ ಲಕ್ಷ್ಮಿ ಕರ ಮಾದ್ಯೆ ಸರಸ್ವತಿ ಕರಾ ಮೂಲೆತು ಗೋವಿಂದ ಪ್ರಭಾತೆ ಕರ ದರ್ಶನಂ “ಇದರ ಅರ್ಥ : ಕೈಯ ತುದಿಯಲ್ಲಿ ಅಂದರೆ ಬೆರಳುಗಳ ತುದಿಯಲ್ಲಿ ಲಕ್ಷ್ಮಿ ನೆಲೆಸಿದ್ದಾಳೆ ಕೈಯ ಮಧ್ಯೆ ಸರಸ್ವತಿ ಇದ್ದಾಳೆ ಕೈಯ ಬುಡದಲ್ಲಿ ಗೋವಿಂದ ನೆಲೆಸಿರುತ್ತಾನೆ . ಈ ಬೆಳಗಿನ ಸಮಯದಲ್ಲಿ ನಾನು ಅಂಗೈಯಲ್ಲಿ ಈ ದೇವರುಗಳ ದರ್ಶನ ಮಾಡಿದ್ದೇನೆ ..

ದೇವರ ಪೂಜೆಯಿಂದ ನಿಮ್ಮ ಮನಸ್ಸಲ್ಲಿ ಧನಾತ್ಮಕ ಶಕ್ತಿಯ ಪ್ರಭಾವ ಎಚ್ಚುತ್ತೆ. ದಿನದ ಕೆಲಸಗಳಲ್ಲಿ ಏಕಾಗ್ರತೆ ಕೂಡ ಹೆಚ್ಚಿ ಆ ದಿವಸ ನೀವು ಮಾಡುವಂತ ಕೆಲಸಗಳಲ್ಲಿಯೂ ನಿಮಗೆ ಸಫಲತೆಯು ಹೆಚ್ಚುತ್ತದೆ ಅಲ್ಲದೆ ಲಕ್ಷ್ಮಿ ದೇವಿಯ ಆಶೀರ್ವಾದ ನಿಮ್ಮ ಮೇಲೆ ಆಗಿ ಹಣ ನಿಮ್ಮ ಕೈಯಲ್ಲಿ ಉಳಿಯುವುದಕ್ಕೆ ಪ್ರಾರಂಭವಾಗುತ್ತೆ…

ಇನ್ನು ಪವಿತ್ರವಾದ ತುಳಸಿ ಗಿಡವು ನಮ್ಮ ಮನೆಯ ಅಂಗಳದಲ್ಲಿ ಇದ್ದೇ ಇರುತ್ತೆ ಯಾವ ಮನೆಯಲ್ಲಿ ತುಳಸಿ ಗಿಡ ಇರುವುದಿಲ್ಲ ಅಲ್ಲಿ ಶ್ರೀ ಹರಿಯಾವಾಸ ಇರೋದಿಲ್ಲ ಅಂತ ಶಾಸ್ತ್ರಗಳಲ್ಲಿ ಹೇಳಲಾಗಿದೆ .. ಎಲ್ಲಿ ಶ್ರೀ ಹರಿಯ ವಾಸ ಇರುವುದಿಲ್ಲ ಅಲ್ಲಿ ಮಾತೆ ಮಹಾಲಕ್ಷ್ಮಿ ಕೂಡ ಇರುವುದಿಲ್ಲ. ತುಳಸಿ ಗಿಡ ಶ್ರೀ ಕೃಷ್ಣನಿಗೆ ಪ್ರಿಯವಾದ ವೃಕ್ಷವಾಗಿದೆ .

ತುಳಸಿ ಗಿಡ ಶ್ರೀ ಕೃಷ್ಣನಿಗೆ ಪ್ರಿಯವಾದದ್ದು ವೃಕ್ಷವಾಗಿದೆ ಹಾಗಾಗಿ ಮರೆತೆ ಮನೆಯದು ತುಳಸಿ ಗಿಡವನ್ನು ಇಡುವುದನ್ನು ಮರೆಯಬೇಡಿ ಪ್ರತಿದಿನ ಬೆಳಗ್ಗೆ ದೇವರ ಪೂಜೆ ಆದ ಬಳಿಕ ತುಳಸಿ ಗಿಡಕ್ಕೆ ಮೊದಲು ನೀರನ್ನು ಹಾಕಿ ಕೆಲವು ಸ್ವಲ್ಪ ತುಳಸಿ ಗಿಡದ ಹತ್ತಿರ ಸ್ವಲ್ಪ ಹೊತ್ತು ಕುಳಿತುಕೊಳ್ಳಬೇಕ. ಅದರಿಂದ ಬರುವಂತಹ ಶುದ್ಧ ಗಾಳಿಯು . ಧನಾತ್ಮಕ ಶಕ್ತಿಯನ್ನು ತುಂಬುತ್ತೆ.

ಇನ್ನು ನೀವು ಮನೆಯಿಂದ ಹೊರಗಡೆ ಹೋಗುವ ಮುನ್ನ ಹಣೆಗೆ ಚಂದನ ಕುಂಕುಮ ಕೆಸರ ಇತ್ಯಾದಿ ಇಟ್ಕೊಳ್ಳೋದ್ರಿಂದ ನಿಮ್ಮ ಕೆಲಸದಲ್ಲಿ ಯಶಸ್ಸು ನಿಮ್ಮದಾಗುತ್ತೆ. ನಿಮ್ಮ ಹಣೆಗೆ ತಿಲಕವನ್ನು ಇಟ್ಟುಕೊಳ್ಳುವ ಮುನ್ನ” ಓಂ ನಮಃ ಭಗವತೇ ವಾಸುದೇವಯ ” ಅಂತ ಹೇಳೋದಕ್ಕೆ ಮರಿಬೇಡಿ. ಇದರಿಂದ ಪ್ರತಿ ಕೆಲಸದಲ್ಲೇ ನಿಮಗೆ ಯಶಸ್ಸು ದೊರೆಯುತ್ತೆ.

ಇನ್ನು ಮನೆಯಲ್ಲಿ ಮಾಡುವಂತ ಆಹಾರವನ್ನು ದೇವರಿಗೆ ನೈವೇದ್ಯ ಮಾಡಬೇಕು. ಮೊದಲನೇ ರೊಟ್ಟಿಯನ್ನು ಗೋಮಾತೆಗೆ ಮತ್ತು ಕೊನೆಯ ರೊಟ್ಟಿಯನ್ನು ನಾಯಿಗೆ ತಿನ್ನೋದಕ್ಕೆ ಕೊಡಬೇಕು. ಇದು ಪರಿಣಾಮಕಾರಿ ಉಪಾಯ ಪ್ರಾಣಿಗಳಿಗೆ ಆಹಾರ ನೀಡುವುದರಿಂದ ಶ್ರೀ ಕೃಷ್ಣ ಸದಾ ತಮ್ಮ ಮೇಲೆ ಕೃಪಾಕಟಾಕ್ಷವಿರುತ್ತಾನೆ ಅಂತ ಹೇಳಲಾಗುತ್ತದೆ.

ಇನ್ನು ಬೆಳಗ್ಗೆ ಎದ್ದ ತಕ್ಷಣ ನಾವು ಭಗವಂತನ ನಾಮಸ್ಮರಣೆ ಮಾಡುವಂತೆ ರಾತ್ರಿ ಮಲಗುವ ಮುನ್ನ ದೇವರ ನಾಮಸ್ಮರಣೆಯನ್ನು ಮಾಡಬೇಕು. ಆ ದಿನದಲ್ಲಿ ನಿಮ್ಮಿಂದ ತಿಳಿದು ಅಥವಾ ತಿಳಿಯದೆ ತಪ್ಪಾಗಿದ್ದರೆ. ಭಗವಂತನಲ್ಲಿ ಕ್ಷಮೆ ಕೇಳಬೇಕು.

ಇನ್ನು ಮಲಗುವ ಮುನ್ನ ನೀವು ಮತ್ತೆ ಮಹಾಲಕ್ಷ್ಮಿ ಬೀಜ ಮಂತ್ರವಾದ . ” ಶ್ರೀಮ್ ” ಅನ್ನೋ ಕೇವಲ 18 ಬಾರಿ ಹೇಳಿ ಮಲಗಬೇಕು ಅದನ್ನ ಈ ರೀತಿಯಾಗಿ ಹೇಳಿ. ಓಂ ಶ್ರೀಮ್ ಓಂ ಶ್ರೀಮ್ . ಅಂತ 18 ಬಾರಿ ಹೇಳಿ ಮಲಗಬೇಕು.. ಇದನ್ನ ಕೇವಲ 41 ದಿನ ಮಾಡಿ ನಿಮ್ಮ ಜೀವನದಲ್ಲಿ . ಅದೆಂತ ಅದ್ಭುತವಾದಂತ ಬದಲಾವಣೆ ಚಮತ್ಕಾರ ಆಗುತ್ತೆ ಅಂತ ನೀವೇ ನೋಡಿ. ನಿಮ್ಮ ಜೀವನದಲ್ಲಿ ತುಂಬಾ ಹೇಳಿಕೆ ಆಗುತ್ತೆ ಮಾಡುವಂತ ಕೆಲಸ ವ್ಯಾಪಾರ ನೌಕರಿಯಲ್ಲಿ ದ್ವಿಗುಣ ಧನ ಲಾಭ ನಿಮ್ಮದಾಗುತ್ತೆ. ಮನೆಯಲ್ಲಿ ನೆಮ್ಮದಿ ನೆಲೆಸುತ್ತೆ..ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯುತ್ತವೆ. ಸಾಲ ತೇರುತ್ತೆ ಒಂದು ಎರಡು ಅದ್ಭುತ ಚಮತ್ಕಾರ ನಿಮ್ಮ ಜೀವನದಲ್ಲಿ ನಡೆಯುತ್ತೆ…

Related Post

Leave a Comment