ಈ ರೀತಿ ಹನುಮಾನ್ ಚಾಲೀಸಾ ಪಠಣೆ ಮಾಡಿ! ಪ್ರತಿ 8 ಸಾಲುಗಳ ಮಧ್ಯ ಇದನ್ನು ಸೇರಿಸಿ ಹೇಳಬೇಕು! ಜೈ ಶ್ರೀ ರಾಮ್

Written by Anand raj

Published on:

ಭಗವಾನ್ ಹನುಮಂತನು ಶಿಸ್ತನ್ನು ಪ್ರೀತಿಸುತ್ತಾನೆ. ಅದಕ್ಕಾಗಿಯೇ ಹನುಮಂತನ ಭಕ್ತರು ಸಹ ಶಿಸ್ತನ್ನು ಅನುಸರಿಸುತ್ತಾರೆ. ಹನುಮಂತನು ತನ್ನ ಭಕ್ತರ ಎಲ್ಲಾ ತೊಂದರೆಗಳನ್ನು ಬಹುಬೇಗ ಈಡೇರಿಸುತ್ತಾನೆ. ಅಂದರೆ, ಹನುಮಂತನು ತನ್ನ ಭಕ್ತರನ್ನು ಸಂಕಟಗಳಿಂದ ದೂರವಿಡುತ್ತಾನೆ. ಹನುಮಂತನ ತನ್ನೆಲ್ಲಾ ಭಕ್ತರ ಸಂಕಟಗಳನ್ನು ದೂರಾಗಿಸುವುದರಿಂದ ಆತನನ್ನು ಸಂಕಟ ಮೋಚನ ಎಂದು ಕರೆಯುತ್ತಾರೆ.

ಹಿಂದೂ ಧರ್ಮದಲ್ಲಿ ಪ್ರತೀ ದಿನವು ತನ್ನದ ಆದ ವಿಶಿಷ್ಟತೆಯನ್ನು ಒಳಗೊಂಡಿದೆ. ಪ್ರತೀ ದಿನವೂ ಒಂದೊಂದು ದೇವರನ್ನು ಪೂಜಿಸಲಾಗುತ್ತದೆ. ಅದೇ ರೀತಿ ಮಂಗಳವಾರ ಮತ್ತು ಶನಿವಾರದ ದಿನದಂದು ಭಗವಾನ್ ಹನುಮಂತನನ್ನು ಪೂಜಿಸಲಾಗುತ್ತದೆ. ಈ ದಿನಗಳಲ್ಲಿ ಭಗವಾನ್ ಹನುಮಂತನನ್ನು ಪೂಜಿಸುವುದರಿಂದ ಶನಿ ಮತ್ತು ಮಂಗಳ ಗ್ರಹಗಳಿಗೆ ಸಂಬಂಧಿಸಿದ ಸಮಸ್ಯೆಗಳು ದೂರಾಗುತ್ತದೆ ಮತ್ತು ಅನೇಕ ರೀತಿಯ ಅಡೆತಡೆಗಳು ನಾಶವಾಗುತ್ತದೆ ಎಂದು ಹೇಳಲಾಗಿದೆ.

ಸಂತ ತುಳಸಿದಾಸರಿಂದ ರಚಿಸಲ್ಪಟ್ಟ ಹನುಮಾನ್ ಚಾಲೀಸಾವನ್ನು ಪ್ರತಿನಿತ್ಯ ಲಕ್ಷಾಂತರ ಮಂದಿ ಪಾರಾಯಣ ಮಾಡುತ್ತಾರೆ. ಹನುಮಾನ್ ಚಾಲೀಸಾ ಕೇವಲ ಶ್ಲೋಕವಲ್ಲ. ಅದರಲ್ಲಿಇಡೀ ಬ್ರಹ್ಮಾಂಡದ ರಹಸ್ಯವೇ ಅಡಗಿದೆ. ಉದಾಹರಣೆಗೆ ಸೂರ್ಯ ಮತ್ತು ಭೂಮಿಯ ನಡುವಿನ ಅಂತರವೆಷ್ಟು ಎಂಬುದನ್ನು ಸಂತ ತುಳಸಿದಾಸರು 15ನೇ ಶತಮಾನದಲ್ಲೇ ಹೇಳಿದ್ದರು. ಹನುಮಾನ್ ಚಾಲೀಸಾದ ಪಾರಾಯಣದಿಂದ ನಕಾರಾತ್ಮಕ ಶಕ್ತಿಗಳು ಕಳೆದು ಹೋಗಿ, ಸಕಾರಾತ್ಮಕ ಶಕ್ತಿಯ ಪರಿಣಾಮ ಸೃಷ್ಟಿಯಾಗುತ್ತದೆ. ಅದರಲ್ಲಿನ 40 ಶ್ಲೋಕಗಳು 40 ಬಗೆಯ ದೋಷಗಳನ್ನು ನಿವಾರಣೆ ಮಾಡುತ್ತವೆ ಎಂಬ ಉಲ್ಲೇಖವಿದೆ.

ಹನುಮಾನ್ ಚಾಲೀಸಾ ಪ್ರಾಮುಖ್ಯತೆ:ಹನುಮಾನ್ ಚಾಲೀಸಾವನ್ನು ಪ್ರತಿನಿತ್ಯ ಪಠಿಸಬೇಕು. ಅದರಲ್ಲೂ, ಶನಿವಾರ ಹನುಮಾನ್ ಚಾಲೀಸಾ ಪಠಿಸುವುದರಿಂದ ಶನಿ ದೇವನು ಅವರ ಎಲ್ಲಾ ಕಷ್ಟಗಳನ್ನು ತೆಗೆದುಹಾಕುತ್ತಾನೆ. ರಾಮಾಯಣದ ಸಂದರ್ಭದಲ್ಲಿ ಭಗವಾನ್ ಹನುಮಂತನು ರಾವಣನಿಂದ ಶನಿಯನ್ನು ರಕ್ಷಿಸುತ್ತಾನೆ. ಆ ಕಾರಣದಿಂದ ಹನುಮಂತನ ಭಕ್ತರಿಗೆ ಯಾವುದೇ ತೊಂದರೆಯನ್ನು ನೀಡುವುದಿಲ್ಲವೆಂದು ಭರವಸೆಯನ್ನು ನೀಡಿರುತ್ತಾನೆ. ಯಾವ ವ್ಯಕ್ತಿ ಶನಿ ದೋಷವನ್ನು, ಸಾಡೇಸಾತಿ ಶನನಿ ದೋಷವನ್ನು ಮತ್ತು ಶನಿ ಮಹಾದಶಾ ಸೇರಿದಂತೆ ಶನಿಗೆ ಸರಿದಂತೆ ಇನ್ನಿತರ ಸಮಸ್ಯೆಗಳನ್ನು ತಮ್ಮ ಜೀವನದಲ್ಲಿ ಎದುರಿಸುತ್ತಿದ್ದರೆ ಅವರು ಪ್ರತಿನಿತ್ಯ ಸಾಧ್ಯವಾಗದಿದ್ದರೆ ಮಂಗಳವಾರ ಮತ್ತು ಶನಿವಾರದಂದು ತಪ್ಪದೇ ಹನುಮಾನ್ ಚಾಲೀಸಾವನ್ನು ಪಠಿಸಬೇಕು.

ಹನುಮಾನ್ ಚಾಲೀಸಾ ಪಠಿಸುವ ಸರಿಯಾದ ವಿಧಾನ:

ಹನುಮಾನ್ ಚಾಲೀಸಾಗೆ ಸಂಬಂಧಿಸಿದಂತೆ, ಅದರ ಪಠಣವನ್ನು ಸರಿಯಾ ರೀತಿಯಲ್ಲಿ ಮಾಡಿದರೆ ಮಾತ್ರ ಪೂರ್ಣ ಲಾಭವನ್ನು ಪಡೆಯಲಾಗುತ್ತದೆ ಎಂಬ ನಂಬಿಕೆ ಇದೆ. ಹನುಮಾನ್ ಚಾಲಿಸಾ ಪಠಿಸಲು ಸರಿಯಾದ ಮಾರ್ಗವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ನೀವು ಶನಿವಾರ ಅಥವಾ ಇನ್ನಿತರ ದಿನಗಳಲ್ಲಿ ಹನುಮಾನ್ ಚಾಲೀಸಾವನ್ನು ಪಠಿಸಿದರೆ, ಮೊದಲು ಸ್ನಾನ ಮಾಡಿ. ಸ್ವಚ್ಚವಾದ ಬಟ್ಟೆಗಳನ್ನು ಧರಿಸಿದ ನಂತರ, ಹನುಮನ ವಿಗ್ರಹ ಅಥವಾ ಚಿತ್ರದ ಮುಂದೆ ಕುಳಿತು ಹನುಮಾನ್ ಚಾಲೀಸಾವನ್ನು ಪಠಣ ಮಾಡಬೇಕು. ಮಲ್ಲಿಗೆ ಎಣ್ಣೆ ಮತ್ತು ಸಿಂಧೂರವನ್ನು ಹನುಮನಿಗೆ ಅರ್ಪಿಸಿ.

ಹನುಮಾನ್ ಚಾಲೀಸಾ ಪಾಠವನ್ನು ಪ್ರಾರಂಭಿಸುವ ಮೊದಲು ಹನುಮಂತನನ್ನು ನೆನೆಯಿರಿ ಮತ್ತು ಚಿತ್ರದ ಮುಂದೆ ಕಮಂಡಲದಲ್ಲಿ ನೀರನ್ನು ಇರಿಸಿ. ಶನಿವಾರ ಬೆಳಗ್ಗೆ ಮತ್ತು ಸಂಜೆ ಎರಡೂ ಹೊತ್ತು ಹನುಮಾನ್ ಚಾಲೀಸಾ ಪಠಿಸುವುದು ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಹನುಮಾನ್ ಚಾಲೀಸಾ ಪಠಣದ ನಂತರ, ಆ ನೀರನ್ನು ಪ್ರಸಾದದ ರೂಪದಲ್ಲಿ ಸ್ವೀಕರಿಸಬೇಕು. ಅಲ್ಲದೆ, ಈ ನೀರನ್ನು ಮನೆಯ ಮೂಲೆ ಮೂಲೆಗಳಲ್ಲಿ ಸಿಂಪಡಿಸಬೇಕು. ಇದನ್ನು ಮಾಡುವುದರಿಂದ ಮನೆಯ ಋಣಾತ್ಮಕ ಶಕ್ತಿಯು ನಾಶವಾಗುತ್ತದೆ.

ಇನ್ನು ಒಂದು ಆಂಜನೇಯ ವಿಗ್ರಹ ಮುಂದೆ ಒಂದು ಗ್ಲಾಸ್ ನೀರು ಒಳಗೆ ನಿಂಬೆಹಣ್ಣನ್ನು 24 ಗಂಟೆ ಇಡಬೇಕು. ನಂತರ ಹೊರಗೆ ತೆಗೆದು ಒಂದೇ ಬಾರಿ ಕತ್ತರಿಸಬೇಕು. ನಂತರ ನಿಂಬೆಹಣ್ಣನ್ನು ಮತ್ತು 24 ಲವಂಗವನ್ನು ಮರಳಿ ಸಿಂಧೂರದಲ್ಲಿ ಮುಳುಗಿಸಿ ಇಡಬೇಕು. ಇದೆ ರೀತಿ 24 ಗಂಟೆಕಾಲ ಇಡಬೇಕು. ನಂತರ ಲವಂಗವನ್ನು ನಿಂಬೆಹಣ್ಣಿನ ಒಳಗೆ ಚುಚ್ಚಿ ಇಡಬೇಕು. ನಂತರ ಇದನ್ನು ಸಿಂಧೂರದಲ್ಲಿ ಮುಳುಗಿಸಿ ಇಡಬೇಕು. ಈ ರೀತಿ ಮೂರು ದಿನ ಪ್ರಯೋಗಗಳ ನಂತರ ನಿಮ್ಮ ಶತ್ರುವಿನ ಯಾವುದಾದರು ವಸ್ತುಗಳನ್ನು ತೆಗೆದುಕೊಳ್ಳಬೇಕು ಅಥವಾ ಕೆಂಪು ಹಳೆ ಮೇಲೆ ಅವರ ಹೆಸರು ಬರೆದು ಶತ್ರುನಾಶಯ ಸ್ವಟ್ ಸ್ವಾಹಾ ಎಂದು ಬರೆಯಬೇಕು. ನಂತರ ಹಳೆಯನ್ನು ಫೋಲ್ಡ್ ಮಾಡಿ ನಿಂಬೆಹಣ್ಣಿನಲ್ಲಿ ಇಡಬೇಕು. ನಂತರ ಇದನ್ನು ಕೆಂಪು ದಾರದೊಂದಿಗೆ ಬಳಸಬೇಕು. ಇನ್ನು ನಿಂಬೆಹಣ್ಣು ಯಾವುದೇ ಕಾರಣಕ್ಕೂ ಕಾಣಬಾರದು. ಮರಳಿ ಇದನ್ನು ಸಿಂಧೂರದಲ್ಲಿ ಮುಳುಗಿಸಿ 5ನೇ ದಿನದ ತನಕ ಇಡಬೇಕು. ಈ ರೀತಿಯಾಗಿ ಮಾಡಿದರೆ ಸುಲಭವಾಗಿ ಶತ್ರುಗಳಿಂದ ಮುಕ್ತಿ ಸಿಗುತ್ತದೇ. ಶತ್ರುಗಳು ಮರಳಿ ತಿರುಗಿ ಸಹ ನೋಡುವುದಿಲ್ಲ. ಯಾವುದೇ ಕಾರಣಕ್ಕೂ ತೊಂದರೆ ಕೂಡ ಕೊಡುವುದಿಲ್ಲ. 5 ದಿನದ ಬಳಿಕ ಆ ನಿಂಬೆಹಣ್ಣನ್ನು ಅರಳಿಮರದ ಕೆಳಗೆ ಊತಕಬೇಕು ಹಾಗು ಈ 5 ದಿನ ಹನುಮಾನ್ ಚಾಲೀಸಾವನ್ನು ಜಪ ಮಾಡಬೇಕು ಮತ್ತು ಬೂದಿ ಲಡ್ಡುವಿನ ನೈವೇದ್ಯವನ್ನು ಮಾಡಬೇಕು.

Related Post

Leave a Comment