ಜನವರಿ 29 ಸಂಕಷ್ಟಹರ ಚತುರ್ಥಿ ಇದೆ. ಈ ಒಂದು ಉಪಾಯ ಮಾಡಿದರೆ ಜೀವನದಲ್ಲಿ ಬರುವ ವಿಘ್ನಗಳು ಎಲ್ಲಾ ದೂರ ಆಗುತ್ತದೆ.ಸಂಕಷ್ಟಹರ ಚತುರ್ಥಿ ದಿನ ಪೂಜೆ ಉಪವಾಸ ಚಂದ್ರ ದರ್ಶನ ಆದ ನಂತರ ಫಲ ಆಹಾರವನ್ನು ಸ್ವೀಕಾರ ಮಾಡುವ ಪದ್ಧತಿ ಇದೆ. ಸಂಕಷ್ಟಹರ ಚತುರ್ಥಿ ದಿನ ನಿಯಮವನ್ನು ಪಾಲಿಸಿ ಚಂದ್ರ ದರ್ಶನ ಅದಬಳಿಕ ಉಪಹಾರ ಮಾಡಬಹುದು. ಇಲ್ಲವಾದರೆ ಬೆಳಗ್ಗೆ ಎದ್ದು ಸ್ನಾನ ಮಾಡಿ ದೇವರ ಮನೆ ಹತ್ತಿರ ಬಂದು ದೇವರಿಗೆ ದೀಪ ಬೆಳಗಿ. ನಂತರ ಎರಡು ಆಡಿಕೆ ತೆಗೆದುಕೊಂಡು ಗಣೇಶನ ಫೋಟೋ ಎದುರು ಇಡಬೇಕು.
ಅದರ ಮೇಲೆ 21 ಗರಿಕೆ ಹುಲ್ಲನ್ನು ಇಡಬೇಕು. ನಂತರ ಅಕ್ಷತೆಯನ್ನು ತೆಗೆದುಕೊಂಡು ಆಡಿಕೆ ಮತ್ತು ಗರಿಕೆ ಮೇಲೆ ಅಕ್ಷತೆ ಹಾಕುತ್ತ 108 ಬಾರಿ ಓಂ ಗಂ ಗಣಪತಯೇ ನಮಃ ಮಂತ್ರವನ್ನು ಹೇಳಬೇಕು. ನಂತರ ದೇವರ ಬಳಿ ಒಳ್ಳೆದಾಗಲಿ ಎಂದು ಅಷ್ಟೇ ಬೇಡಿಕೋ ಅದು ಬಿಟ್ಟು ಸಾಲ ಇದೆ ಮದುವೆ ಸೆಟ್ ಆಗುತ್ತಿಲ್ಲ ಎಂದು ಹೇಳಬೇಡ.
ಆಡಿಕೆ ಮತ್ತು ಗರಿಕೆಯನ್ನು 24 ಗಂಟೆ ಹಾಗೆ ಬಿಟ್ಟುಬಿಡಿ. ಮರುದಿನ ಸ್ನಾನ ಮಾಡಿ ದೀಪ ಬೆಳಗಿ ಅಲ್ಲಿರುವ ಆಡಿಕೆಯನ್ನು ತೆಗೆದುಕೊಂಡು ಒಂದನ್ನು ಮನೆ ಯಜಮಾನನಿಗೆ ಕೊಡಬೇಕು.ಇನೊಂದು ಆಡಿಕೆ ಬೆಟ್ಟವನ್ನು ದೇವರ ಮನೆಯಲ್ಲಿ ಇಡಬೇಕು ಹಾಗು ಗರಿಕೆಯನ್ನು ಹಾಗೆ ಇಡಬೇಕು. ಒಂದು ತಿಂಗಳು ಅದಬಳಿಕ ಗರಿಕೆಯನ್ನು ಯಾರು ತುಳಿಯದೆ ಇರುವ ಜಾಗಕ್ಕೆ ಹಾಕಬೇಕು. ಪ್ರತಿ ಸಂಕಷ್ಟಹರ ದಿನ ಮಾಡಿಕೊಳ್ಳಬಹುದು. ಈ ರೀತಿ ಮಾಡಿದರೆ ನಿಮ್ಮ ಮೇಲೆ ಗಣೇಶನ ಕೃಪೆ ನಿಮಗೆ ಸಿಗುತ್ತದೆ.