ಶ್ರಾವಣ ಮಾಸದಲ್ಲಿ ಶಿವನ ಈ ಪೂಜೆಗೆ ಏನು ಫಲ ತಿಳಿದುಕೊಳ್ಳಿ!

Written by Anand raj

Published on:

ಶ್ರಾವಣ ಮಾಸದ ಪ್ರತಿಯೊಂದು ದಿನವೂ ವಿಶೇಷವಾಗಿರುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಶ್ರಾವಣ ಮಾಸವನ್ನು ಭಗವಾನ್ ಭೋಲೆನಾಥನಿಗೆ ಸಮರ್ಪಿಸಲಾಗಿದೆ. ಈ ಶ್ರಾವಣ ಮಾಸದಲ್ಲಿ ಸೋಮವಾರ ಭಗವಾನ್ ಶಿವನನ್ನು ಯಥಾವತ್ತಾಗಿ ಪೂಜಿಸುವುದರಿಂದ ವ್ಯಕ್ತಿಯ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಎನ್ನುವ ನಂಬಿಕೆಯಿದೆ. ಭಗವಾನ್ ಭೋಲೆನಾಥನ ಆಶೀರ್ವಾದವನ್ನು ನೀವು ಪಡೆಯಲು ಬಯಸಿದರೆ, ಶ್ರಾವಣ ಮಾಸದಲ್ಲಿ ಶಿವನನ್ನು ಕಡ್ಡಾಯವಾಗಿ ಪೂಜಿಸಿ. ಹಾಗಾದರೆ, ವಿಧಿ – ವಿಧಾನಗಳ ಪ್ರಕಾರ, ಶಿವನನ್ನು ಪೂಜಿಸುವುದು ಹೇಗೆ..? ಶ್ರಾವಣ ಶಿವ ಪೂಜೆಯಲ್ಲಿ ನಾವು ಯಾವ ವಸ್ತುಗಳನ್ನು ಬಳಸಿಕೊಂಡು ಶಿವನನ್ನು ಪೂಜಿಸಬೇಕು..? ಶ್ರಾವಣ ಶಿವ ಪೂಜೆಯ ವಿಧಿ – ವಿಧಾನಗಳು ಹೀಗಿವೆ ನೋಡಿ..

ಶ್ರಾವಣ ಮಾಸದಲ್ಲಿ ಶಿವ ಪೂಜೆ ಮಾಡೋದು ಹೇಗೆ..?

  1. ಮೊದಲನೆಯದಾಗಿ, ಶ್ರಾವಣ ಮಾಸದಲ್ಲಿ ಬ್ರಹ್ಮ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ. ಸ್ನಾನದ ನಂತರ ಶುಭ್ರವಾದ ಬಟ್ಟೆಗಳನ್ನು ಧರಿಸಿ.
  2. ಮನೆಯ ದೇವರ ಕೋಣೆಯಲ್ಲಿ ದೇವರಿಗೆ ದೀಪವನ್ನು ಹಚ್ಚಿ.
  3. ಗಂಗಾಜಲದಿಂದ ಎಲ್ಲಾ ದೇವಾನುದೇವತೆಗಳಿಗೆ ಅಭಿಷೇಕ ಮಾಡಿ.
  4. ಭಗವಾನ್ ಭೋಲೆನಾಥನಿಗೆ ಹೂವುಗಳನ್ನು ಮತ್ತು ಬಿಲ್ವಪತ್ರೆಯನ್ನು ಅರ್ಪಿಸಿ.
  5. ಭಗವಾನ್ ಶಿವನಿಗೆ ಆರತಿಯನ್ನು ಮಾಡಿ ಮತ್ತು ಭೋಗವನ್ನು ಅರ್ಪಿಸಿ.
  6. ಈ ಸಮಯದಲ್ಲಿ ನೀವು ಶಿವನಿಗೆ ಸಾತ್ವಿಕ ವಸ್ತುಗಳನ್ನು ಮಾತ್ರ ನೀಡಬೇಕೆಂಬುದನ್ನು ಗಮನದಲ್ಲಿಟ್ಟುಕೊಳ್ಳಿ.
  7. ಈ ಮಾಸದಲ್ಲಿ ಶಿವ ನಾಮ ಸ್ಮರಣೆಯನ್ನು ಹೆಚ್ಚಾಗಿ ಮಾಡಿ.

ಉಪವಾಸದ ನಿಯಮಗಳಾವುವು..?

  1. ಈ ದಿನ ಸಾತ್ವಿಕ ಆಹಾರವನ್ನು ಸೇವಿಸಿ ಹಾಗೂ ಬೆಳ್ಳುಳ್ಳಿ ಮತ್ತು ಈರುಳ್ಳಿಯಂತಹ ತಾಮಸಿಕ ಆಹಾರವನ್ನು ಸೇವಿಸಬಾರದು.
  2. ಶ್ರಾವಣ ಮಾಸದಲ್ಲಿ ಮಾಂಸ ಮತ್ತು ಮದ್ಯವನ್ನು ಸೇವಿಸುವುದನ್ನು ತಪ್ಪಿಸಬೇಕು.
  3. ಬ್ರಹ್ಮಚರ್ಯವನ್ನು ಅನುಸರಿಸಿ.
  4. ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ.

ಶ್ರಾವಣ ಶಿವ ಪೂಜೆಗೆ ಬೇಕಾಗುವ ಪೂಜೆ ಸಾಮಾಗ್ರಿಗಳು:

  • ಹೂವುಗಳು
  • ಐದು ಬಗೆಯ ಹಣ್ಣುಗಳು
  • ಪೂಜೆಯ ಪಾತ್ರೆಗಳು
  • ಕುಶದ ಆಸನ
  • ಮೊಸರು
  • ತುಪ್ಪ
  • ಜೇನುತುಪ್ಪ
  • ಗಂಗಾಜಲ
  • ಪಂಚರಸ
  • ಜನೇವು

ಶ್ರಾವಣ ಮಾಸದ ಮಹತ್ವವೇನು? ಇಲ್ಲಿದೆ ಮಾಹಿತಿ

  • ಬಿಲ್ವಪತ್ರೆ
  • ಧಾತುರ
  • ಭಾಂಗ್
  • ಬೋರೆ ಹಣ್ಣು
  • ಸಿಹಿತಿಂಡಿಗಳು
  • ಹಸಿ ಹಸುವಿನ ಹಾಲು
  • ಧೂಪ
  • ದೀಪ
  • ಬಾರ್ಲಿ
  • ಮಂದಾರ ಹೂವು
  • ಕಬ್ಬಿನ ರಸ
  • ಕರ್ಪೂರ
  • ಶ್ರೀಗಂಧ ಇತ್ಯಾದಿ.

ಭಗವಾನ್‌ ಶಿವನನ್ನು ಶ್ರಾವಣ ಮಾಸದಲ್ಲಿ ಈ ಮೇಲಿನ ವಿಧಿ – ವಿಧಾನಗಳ ಪ್ರಕಾರ ಪೂಜಿಸುವುದರಿಂದ ಶ್ರಾವಣ ಮಾಸದಲ್ಲಿ ಶಿವನನ್ನು ಪೂಜಿಸುವುದರ ಪ್ರಯೋಜನ ಪ್ರಾಪ್ತವಾಗುತ್ತದೆ. ನೀವೂ ಶ್ರಾವಣ ಮಾಸದಲ್ಲಿ ಶಿವನನ್ನು ಪೂಜಿಸಲು ಬಯಸಿದರೆ ಖಂಡಿತ ಈ ಮೇಲಿನ ಪೂಜೆ ವಿಧಿ – ವಿಧಾನಗಳನ್ನು ಅನುಸರಿಸಿ.

  • –ಶಿವನಿಗೆ ತುಪ್ಪದಿಂದ ಅಭಿಷೇಕ ಮಾಡಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ.
  • -ಮೋಸರಿನಿಂದ ಅಭಿಷೇಕ ಮಾಡಿದರೆ ಮುಂಬರುವ ಶುಭ ಶಕುನಗಳು ಗಟಿಸುತ್ತವೆ.
  • -ಸಾಲಬಾದೆಯಿಂದ ಬಳಲುತ್ತಿದ್ದಾರೆ ಶ್ರಾವಣ ಸೋಮವಾರದಂದು ಅತ್ತಿ ಹಿಟ್ಟಿನಿಂದ ಶಿವನಿಗೆ ಅಭಿಷೇಕ ಮಾಡುವುದರಿಂದ ನಿಮ್ಮ ಸಾಲ ಬಾದೆ ದೂರವಾಗುತ್ತದೆ.
  • -ಹೆಚ್ಚಿನ ಶತ್ರುಕಾಟ ನಿಮಗೆ ಇದ್ದರೆ ಕಬ್ಬಿನ ಹಾಲಿನಿಂದ ಶಿವನಿಗೆ ಅಭಿಷೇಕ ಮಾಡುವುದು ತುಂಬಾನೇ ಉತ್ತಮ ಹಾಗು ಅರೋಗ್ಯ ವೃದ್ಧಿ ಕೂಡ ಆಗುತ್ತದೆ.
  • -ಪದೇ ಪದೇ ನಿಮಗೆ ಸಾವಿನ ಭಯ ಕಾಡುತ್ತಿದ್ದಾರೆ ಶಿವನಿಗೆ ನಿಂಬೆಹಣ್ಣಿನ ರಸದಿಂದ ಶ್ರಾವಣ ಸೋಮವಾರದಂದು ಅಭಿಷೇಕ ಮಾಡುವುದರಿಂದ ಸಾವಿನ ಭಯ ಕೂಡ ದೂರವಾಗುತ್ತದೆ. ರೋಗದಿಂದ ಮುಕ್ತಿ ಹೊಂದಬಹುದು.
  • -ಮನೆಯಲ್ಲಿ ಕಲಹ ಮತ್ತು ಹೆಚ್ಚಿನ ಸಮಸ್ಸೆಯಿಂದ ಬಳಲುತ್ತಿದ್ದಾರೆ ಎಳೆ ನೀರಿನಿಂದ ಶಿವನಿಗೆ ಅಭಿಷೇಕ ಮಾಡಿದರೆ ಮನೆಯಲ್ಲಿ ಶಾಂತಿಯುತ ನೆಮ್ಮದಿ ನಿರ್ಮಾಣ ಆಗುತ್ತದೆ.
  • -ನೀವು ಎಷ್ಟೇ ಕಷ್ಟ ಪಟ್ಟರು ಹಣ ನಿಲ್ಲುತ್ತಿಲ್ಲವಾದರೆ ಸೋಮವಾರದ ಶಿವನಿಗೆ ಅನ್ನದ ಅಭಿಷೇಕವನ್ನು ಮಾಡಬೇಕು.
  • -ಸಂಪತ್ತಿನ ದೇವತೆ ಒಲಿಯಬೇಕು ಎಂದರೆ ಶಿವ ಲಿಂಗಕ್ಕೆ ಗಂಧದ ಲೇಪನದ ಅಭಿಷೇಕ ಮಾಡಿದರೆ ಲಕ್ಷ್ಮಿ ಕೃಪಾಕಟಾಕ್ಷ ಸಿಗುತ್ತದೆ. ಇನ್ನು ಮಹಾ ಮೃತ್ಯುಂಜಯ ಮಂತ್ರ ಜಪಿಸಿದರೆ ತುಂಬಾ ಒಳ್ಳೆಯದು.

Related Post

Leave a Comment